Webdunia - Bharat's app for daily news and videos

Install App

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್

Webdunia
ಭಾನುವಾರ, 10 ಸೆಪ್ಟಂಬರ್ 2017 (19:12 IST)
ಏರ್ ಪೋರ್ಟ್, ಮೆಟ್ರೋ ರೈಲು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

ವಿಮಾನಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಮೇಲೆ ಭಯೋತ್ಪಾದಕರು ಕೆಮಿಕಲ್ ದಾಳಿಗೆ ಉದ್ದೇಶಿಸಿರುವ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ದೇಶಾದ್ಯಂತ ಹೈ ಅಲರ್ಟ್`ಗೆ ಗೃಹ ಇಲಾಖೆ ಸೂಚಿಸಿದೆ. ಭದ್ರತಾ ವ್ಯವಸ್ಥೆ ಬಲಪಡಿಸುತ್ತಿದ್ದಂತೆ ಉಗ್ರರು ದಾಳಿಗೆ ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದಾರೆ. ಇದರ ಮುಂದುವರೆದ ಭಾಗವೇ ಕೆಮಿಕಲ್ ಅಟ್ಯಾಕ್.

ವಿಷಾನಿಲ ಪ್ರಯೋಗ, ಕೀಟನಾಶಕಗಳ ಸಿಂಪಡಣೆ, ಆಸಿಡ್ ಬಳಕೆ,ತಂಪು ಪಾನೀಯಗಳಿಗೆ ವಿಷ ಹಾಕುವುದು ಈ ರೀತಿಯ ಕೆಮಿಕಲ್ ಯುದ್ಧಕ್ಕೆ ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ಅದರಲ್ಲೂ ಬಸ್, ವಿಮಾನ, ಮೆಟ್ರೋ ರೈಲಿನಂತಹ ಬಾಗಿಲು ಮುಚ್ಚಿದ ಪ್ರದೇಶಗಳಲ್ಲಿ ವಿಷಾನಿಲ ಪ್ರಭಾವ ಹೆಚ್ಚಿರುತ್ತದೆ. ಇಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಅಧಿಕ ಜನರನ್ನ ಬಲಿ ಪಡೆಯುವುದು ಉಗ್ರರ ಪ್ಲಾನ್.

ಈ ಹಿಂದೆ ಇರಾನಿನಲ್ಲಿ ಐಸಿಸ್ ಉಗ್ರರು ನಡೆಸಿದ ವಿಷಾನಿಲ ದಾಳಿಯಲ್ಲಿ ನೂರಾರು ಮುಗ್ಧರು ಪ್ರಾಣಬಿಟ್ಟಿದ್ದರು. ವಿಷಾನಿಲ ಅಷ್ಟು ಅಪಾಯವೆಂದರೆ, ಕೆಲ ಪ್ರಭಾವಶಾಲಿ ಅನಿಲಗಳು ಕ್ಷಣಮಾತ್ರದಲ್ಲಿ ಪ್ರಾಣ ತೆಗೆಯುತ್ತವೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments