Webdunia - Bharat's app for daily news and videos

Install App

ಪತ್ನಿಯನ್ನ ಕೊಂದು ಅಪಘಾತದ ಕಥೆ ಕಟ್ಟಿದ್ದ ಎಸ್`ಪಿ ನಾಯಕನ ಬಣ್ಣ ಬಯಲು ಮಾಡಿದ ಸಿಬಿಐ

Webdunia
ಭಾನುವಾರ, 19 ಫೆಬ್ರವರಿ 2017 (10:31 IST)

ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ್ದ ಸಮಾಜವಾದಿ ಪಕ್ಷದ ಮುಖಂಡ ಅಮನ್ಮಾಣಿ ತ್ರಿಪಾಠಿ ಬಣ್ಣವನ್ನ ಸಿಬಿಐ ಸಲ್ಲಿಸಿರುವ ಚಾರ್ಜ್ ಶಿಟ್ ಬಯಲು ಮಾಡಿದೆ ಎಂದು ಡಿಎನ್`ಎ ವರದಿಮಾಡಿದೆ. 


ತ್ರಿಪಾಠಿ ತನ್ನ ಪತ್ನಿ ಸಾರಾಳಿಗೆ ದೈಹಿಕ ಹಿಂಸೆ ಕೊಟ್ಟು ಕೊಂದಿದ್ದಾನೆ ಬಳಿಕ ಅಪಘಾತದ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಸಿಬಿಐ ಚಾರ್ಜ್ ಶೀಟ್`ನಲ್ಲಿ ಉಲ್ಲೀಖಿಸಲಾಗಿದೆ.

`ಸಾರಾ ಸಿಂಗ್`ಗೆ ಆರೋಪಿಯು ದೈಹಿಕ ಹಿಂಸೆ ನೀಡಿ ಕ್ರೌರ್ಯ ಮೆರೆದಿರುವುದು ತನಿಖೆ ವೇಳೆ ಧೃಡಪಟ್ಟಿದೆ.  ಜುಲೈ 9 2015ರಂದೇ ಸಾರಾಳನ್ನ ಕೊಂದ ಪತಿ ಮೊದಲೇ ಪ್ಲಾನ್ ಮಾಡಿದಂತೆ ಅಪಘಾತದ ಕಥೆ ಕಟ್ಟಿದ್ದಾನೆ’ ಎಂದು ಸಿಬಿಐ ವಕ್ತಾರ ಆರ್,ಕೆ, ಸ್ಪಷ್ಟಪಡಿಸಿದ್ದಾರೆ.

 2013ರಲ್ಲಿ ತ್ರಿಪಾಠಿ ಸಾರಾಳನ್ನ ವಿವಾಹವಾಗಿದ್ದ. 2015ರಲ್ಲಿ ದಂಪತಿ ಲಖನೌಗೆ ತೆರಳುತ್ತಿದ್ದ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆದರೆ, ಅದೇ ಕಾರಿನಲ್ಲಿದ್ದ ತ್ರಿಪಾಠಿಗೆ ಒಂದು ಸಣ್ಣ ಗಾಯವೂ ಆಗದಿರುವ ಬಗ್ಗೆ ಸಾರಾ ತಾಯಿ ಸೀಮಾ ಸಿಂಗ್`ಗೆ ಅನುಮಾನ ಹುಟ್ಟಿತ್ತು. ಪ್ರಕರಣದ ತನಿಖೆಗೆ ಒತ್ತಾಯಿಸಿ ಸೀಮಾ ಕೇಸ್ ದಾಖಲಿಸಿದ್ದರು. ಬಳಿಕ ಕೇಸ್ ಸಿಬಿಐಗೆ ವರ್ಗಾವಣೆಗೊಂಡಿತ್ತು. ಇದೀಗ, ಪ್ರಕರಣ ಭೇದಿಸಿರುವ ಸಿಬಿಐ ಚಾರ್ಜ್`ಶಿಟ್ ಸಲ್ಲಿಸಿದೆ.

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments