Select Your Language

Notifications

webdunia
webdunia
webdunia
webdunia

ವಧುವರರಿಗೂ ತಟ್ಟಿದ ಕಾವೇರಿ ಹೋರಾಟದ ಬಿಸಿ: ಗಡಿಯಲ್ಲಿ ನಡೆದೇ ಹೋದರು

ವಧುವರರಿಗೂ ತಟ್ಟಿದ ಕಾವೇರಿ ಹೋರಾಟದ ಬಿಸಿ: ಗಡಿಯಲ್ಲಿ ನಡೆದೇ ಹೋದರು
ಬೆಂಗಳೂರು , ಮಂಗಳವಾರ, 13 ಸೆಪ್ಟಂಬರ್ 2016 (14:00 IST)
ಕಾವೇರಿ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಹೊತ್ತಿ ಉರಿಯುತ್ತಿದ್ದು ಕಾವೇರಿ ಹೋರಾಟದ ಬಿಸಿ ವಧುವರರನ್ನು ಕೂಡ ತಟ್ಟಿದೆ. 

ಬೆಂಗಳೂರಿನಲ್ಲಿ ವಾಸವಾಗಿರುವ ತಮಿಳುನಾಡು ಮೂಲದ ವಧುವರರು ಇಲ್ಲಿಯೇ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡು ತಾಳಿ ಕಟ್ಟಿಕೊಳ್ಳಲು ತಿರುವಣ್ಣಾಮಲೈಗೆ ಹೊರಟಿದ್ದರು. ಆದರೆ ಗಡಿಯಲ್ಲಿ ಬಸ್ ಸೌಲಭ್ಯವಿಲ್ಲದೇ ಪರದಾಡಿದ ಅವರು ಅನೆಕಲ್ ಬಳಿ 2 ಕೀಲೋಮೀಟರ್ ನಡೆದುಕೊಂಡೇ ಹೋಗುವಂತಾಯಿತು. 
 
ಕಾವೇರಿ ಗಲಭೆ ತೀರ್ವಗೊಂಡಿರುವ ಹಿನ್ನೆಲೆಯಲ್ಲಿ  ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದ್ದು, ನಗರದೆಲ್ಲೆಡೆ 144ನೇ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಎರಡು ರಾಜ್ಯಗಳಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದು ರಾಜೀನಾಮೆ ಸುದ್ದಿ ಕೇವಲ ವದಂತಿಯಂತೆ!