ಕೆಲವು ರಾಜಕಾರಣಿಗಳು ತಾವು ವ್ಯವಸ್ಥೆಗಿಂತ ಮೇಲಿನವರು ಎಂಬಂತೆ ವರ್ತಿಸುತ್ತಾರೆ. ನಿನ್ನೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಅದಕ್ಕೆ ಉತ್ತಮ ಉದಾಹರಣೆ. ಎನ್ಸಿಪಿ ಶಾಸಕರೊಬ್ಬರು ಡೆಪ್ಯುಟಿ ಕಲೆಕ್ಟರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಯಗಢ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ತೈಲ ಪೈಪ್ಲೈನ್ಗೆ ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಡೆಪ್ಯುಟಿ ಕಲೆಕ್ಟರ್ ಅಭಯ್ ಕಲ್ಗುಡ್ಕರ್ ಜತೆ ಶಾಸಕ ಸುರೇಶ್ ಲಾಡ್ ಸಭೆ ನಡೆದಿತ್ತು. ರೈತರಿಗೆ ರೈತರಿಗೆ ನೀಡಬೇಕಾದ ಪರಿಹಾರ ಧನದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಏಕಾಏಕಿ ತಾಳ್ಮೆ ಕಳೆದುಕೊಂಡ ಸುರೇಶ್ ಲಾಡ್ ಡೆಪ್ಯುಟಿ ಕಲೆಕ್ಟರ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಲಾಡ್ ಈ ಪ್ರದೇಶದಲ್ಲಿ ಭೂಮಿಯನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.