Select Your Language

Notifications

webdunia
webdunia
webdunia
webdunia

ಸೀತಾಮಾತೆ ಗರ್ಭಿಣಿಯಾಗಿದ್ದಾಗ ಕಾಡಿಗಟ್ಟಿದ ಶ್ರೀರಾಮ ದೇವರ ವಿರುದ್ಧ ಕೇಸ್ ದಾಖಲು:ಇಂದು ವಿಚಾರಣೆ

ಸೀತಾಮಾತೆ ಗರ್ಭಿಣಿಯಾಗಿದ್ದಾಗ ಕಾಡಿಗಟ್ಟಿದ ಶ್ರೀರಾಮ ದೇವರ ವಿರುದ್ಧ ಕೇಸ್ ದಾಖಲು:ಇಂದು ವಿಚಾರಣೆ
ಸೀತಾಮರಿ(ಬಿಹಾರ್) , ಸೋಮವಾರ, 1 ಫೆಬ್ರವರಿ 2016 (15:23 IST)
ಸೀತಾಮಾತೆಯ ನಡತೆಯನ್ನು ಪ್ರಶ್ನಿಸಿ ಕಾಡಿಗಟ್ಟಿದ ಶ್ರೀರಾಮ ದೇವರ ವಿರುದ್ಧ ಠಾಕೂರ್ ಚಂದನ್ ಕುಮಾರ್ ಎನ್ನುವವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಇಂದು ವಿಚಾರಣೆ ನಡೆಯುತ್ತಿದೆ. 
 
ದೂರುದಾರ ಚಂದನ್‌ಕುಮಾರ್, ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎನ್ನುವುದೇ ನನ್ನ ಸ್ಪಷ್ಟ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.ನ್ಯಾಯಮೂರ್ತಿಗಳು ಇಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. 
 
ಬಟ್ಟೆ ತೊಳೆಯುವವನೊಬ್ಬ ಸೀತಾಮಾತೆಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಶ್ರೀರಾಮ ದೇವರು ಸೀತಾಮಾತೆಯನ್ನು ಕಾಡಿಗಟ್ಟಿದ ಪ್ರಕರಣದಲ್ಲಿ ಸಹೋದರ ಲಕ್ಷ್ಮಣ್‌ರನ್ನು ಕೂಡಾ ಸಹ-ಆರೋಪಿಯಾಗಿಸಲಾಗಿದೆ.
 
ಗರ್ಭಿಣಿ ಪತ್ನಿ ಸೀತಾಮಾತೆಯನ್ನು ಕಾಡಿಗಟ್ಟಿ ಶ್ರೀರಾಮದೇವರು ತಪ್ಪೆಸಗಿದ್ದು, ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ರಾವಣ ಸೀತಾಮಾತೆಯನ್ನು ಅಪಹರಿಸಿದಾಗ ಸೀತಾಮಾತೆ ಯಾವ ತಪ್ಪು ಎಸಗಿದ್ದರು ಎಂದು ಚಂದನ್ ಪ್ರಶ್ನಿಸಿದ್ದಾರೆ.
 
ಯಾವುದೇ ಧರ್ಮದವರ ಮನಸ್ಸಿಗೆ ನೋವುಂಟುಮಾಡುವ ಉದ್ದೇಶವಿಲ್ಲ ಎಂದು ಠಾಕೂರ್ ಚಂದನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada