Webdunia - Bharat's app for daily news and videos

Install App

ನರೇಂದ್ರಾಸನಕ್ಕೆ ಬಹುಪರಾಕ್; ಪಾಕ್‌ಗೆ ಶವಾಸನ ಮಾಡಿಸೋದು ಯಾವಾಗ?

Webdunia
ಗುರುವಾರ, 23 ಜೂನ್ 2016 (18:08 IST)
ಅಂತರಾಷ್ಟ್ರೀಯ ಯೋಗ ದಿನದ ಯಶಸ್ಸಿಗೆ ಪ್ರಧಾನಿ ಮೋದಿಯನ್ನು ಶ್ಲಾಘಿಸಿರುವ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ, ಅದರ ಜೊತೆಗೆ ಯೋಗದಿಂದ ಜಗತ್ತಿನ 130 ರಾಷ್ಟ್ರಗಳೂ ಬಾಗುವಂತೆ ಮಾಡಿದ ಮೋದಿ ಅವರು ಪಾಕಿಸ್ತಾನಕ್ಕೆ ಶವಾಸನ ಮಾಡಿಸುವುದು ಯಾವಾಗ ಎಂದು ಕಿಚಾಯಿಸಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಯೋಗ ದಿನದ ಸಫಲತೆಯನ್ನು ಹೊಗಳಿದ ಸೇನೆ, ಹಣದುಬ್ಬರ, ಭೃಷ್ಟಾಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸಿದೆ. ಜತೆಗೆ ಪಾಕಿಸ್ತಾನ್ ವಿರುದ್ಧವೂ ಕಿಡಿಕಾರಿದೆ. 
 
ನೇರೆರಾಷ್ಟ್ರದ ಬಗ್ಗೆ ಮೋದಿ ಅವರು ಅನುಸರಿಸಿರುವ ನೀತಿ ವಿರುದ್ಧ ಸವಾಲೆಸೆದಿರುವ ಸೇನೆ, ಪಾಕಿಸ್ತಾನಕ್ಕೆ ಸದಾ ಶವಾಸನ ಯೋಗವೇ ಅತ್ಯುತ್ತಮವಾದುದು ಎಂದಿದೆ. ನರೇಂದ್ರಾಸನ ಶೀರ್ಷಿಕೆಯಲ್ಲಿ ಬಂದಿರುವ ಸಂಪಾದಕೀಯದಲ್ಲಿ , ಪ್ರಧಾನಿ ಯೋಗವನ್ನು ವಿಶ್ವದಾದ್ಯಂತ ಕೊಂಡೊಯ್ದರು ಮತ್ತು ಲೋಕಪ್ರಿಯಗೊಳಿಸಿದರು. ಅವರ ಪ್ರಯತ್ನದಿಂದಲೇ ಜಗತ್ತಿನ 130 ರಾಷ್ಟ್ರಗಳಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ ಎಂದು  ಹೊಗಳಿದೆ. ಜತೆಗೆ ಅದೇ ಲೇಖನದ ಮುಂದಿನ ಸಾಲಿನಲ್ಲಿ ನಮ್ಮನ್ನು ಕಾಡುತ್ತಿರುವ ಹಣದುಬ್ಬರಕ್ಕೆ ಮತ್ತು ಭ್ರಷ್ಟಾಚಾರದಂತಹ ವೇದನೆಗೆ ಯೋಗ ಪರಿಹಾರ ನೀಡುವುದೇ ಎಂದು  ಮೋದಿಯರನ್ನು ಪ್ರಶ್ನಿಸಿದೆ. 
 
130 ದೇಶಗಳಿಗೆ ನರೇಂದ್ರಾಸನ ಮಾಡಿಸಿದ ಪ್ರಧಾನಿ ಹೊಗಳಿಕೆಗೆ ಅರ್ಹರು. ಬಾಗಿಸುವವನಿದ್ದರೆ ಜಗತ್ತು ಬಾಗುತ್ತದೆ. ಯೋಗದ ನೆಪದಲ್ಲಿ 130 ದೇಶವನ್ನು ಮೋದಿ ನೆಲದ ಮೇಲೆ ಬೀಳುವಂತೆ ಮಾಡಿದರು ಎಂದು ಸೇನೆ ಮಿತ್ರ ಪಕ್ಷದ ನಾಯಕನನ್ನು ಕೊಂಡಾಡಿದೆ. 
 
ಎಂದಿನ ಶೈಲಿಯಲ್ಲಿ ಪಾಕಿಸ್ತಾನದ ಮೇಲೆ ಸವಾರಿ ಮಾಡಿರುವ ಸೇನೆ, ಪಾಕಿಸ್ತಾನಕ್ಕೆ ‘ಶವಾಸನ’ದ ಸ್ಥಿತಿ ತರುವಂತ ಯೋಗ ಅಂದರೆ ಕೇವಲ ಶಸ್ತ್ರ ಬಲ. ಶವಾಸನವೇ ಅವರಿಗೆ ಯೋಗ್ಯ. ಅವರಿಗೆ ಯಾವಾಗ ಶವಾಸನ ಮಾಡಿಸುತ್ತೀರಿ? ಎಂದು ಮೋದಿ ಅವರನ್ನು ಪ್ರಶ್ನಿಸಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments