Webdunia - Bharat's app for daily news and videos

Install App

ತಮಿಳುನಾಡಲ್ಲಿ 'ಜಯಾ ಫೋಟೋ' ಸರ್ಕಾರ ( ವಿಡಿಯೋ)

Webdunia
ಗುರುವಾರ, 20 ಅಕ್ಟೋಬರ್ 2016 (09:07 IST)
ರಾಜಕಾರಣ ಮತ್ತು ಸಿನಿಮಾ ವಿಚಾರದಲ್ಲಿ ತಮಿಳುನಾಡು ಸಂಪೂರ್ಣ ದೇಶದಲ್ಲೇ ವಿಭಿನ್ನವೆನಿಸಿದೆ. ಅಲ್ಲಿ ನಟರನ್ನು ಮತ್ತು ರಾಜಕಾರಣಿಗಳನ್ನು ಹದ್ದು ಮೀರಿ ಆರಾಧಿಸಲಾಗುತ್ತದೆ. ಅವರಿಗಾಗಿ ತಮಿಳುನಾಡು ಜನರು ಏನನ್ನು ಮಾಡಲು ಬೇಕಾದರೂ ತಯಾರಿರುತ್ತಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಜಯಲಲಿತಾ ಪೋಟೋ ಸರ್ಕಾರ. 

ಹೌದು, ಪ್ರಜಾಪ್ರಭುತ್ವದ ಸರ್ಕಾರದಲ್ಲಿ ನೀವು ಇದನ್ನು ನೋಡುತ್ತಿರುವುದು ಇದೇ ಮೊದಲ ಬಾರಿಗಿರಬೇಕು. ತಮಿಳುನಾಡಿನಲ್ಲಿ ಜಯಾ ಫೋಟೋವನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ. ಅಮ್ಮನ ಫೋಟೋ ಎದುರುಗಡೆಯಲ್ಲಿ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದೆ. 
 
ಮುಖ್ಯಮಂತ್ರಿ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಸರ್ಕಾರವನ್ನು ಸಂಭಾಳಿಸುತ್ತಿರುವ ತಮಿಳುನಾಡು ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಬುಧವಾರ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಿತು.
 
ಕಟ್ಟಾ ಜಯಾ ಬೆಂಬಲಿಗ, ಆರಾಧಕರಾಗಿರುವ ಸೆಲ್ವಂ ಸ್ವಾಮಿನಿಷ್ಠೆ ಇಲ್ಲೂ ಮಂದುವರೆಯಿತು. ಮೇಜಿನ ಮೇಲೆ ಜಯಾ ಫೋಟೋ ಇರಿಸಿ ಅವರು ಸಭೆಯನ್ನು ನಡೆಸಿದರು. 
 
ಕಾವೇರಿ ನದಿ ನೀರು ಹಂಚಿಕೆ ವಿವಾದ ಸೇರಿದಂತೆ ಅನೇಕ ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ. 
 
ಅನಾರೋಗ್ಯ ಪೀಡಿತರಾಗಿರುವ ಮುಖ್ಯಮಂತ್ರಿ ಜಯಲಲಿತಾ ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿರುವುದರಿಂದ ಅವರು ಹೊಂದಿದ್ದ ಖಾತೆಗಳ ಹೊಣೆಗಾರಿಕೆಯನ್ನು ರಾಜ್ಯಪಾಲರು ಸೆಲ್ವಂ ಅವರಿಗೆ ಹೊರಿಸಿದ್ದಾರೆ. 
 
ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರು ಹೊಂದಿದ್ದ ಖಾತೆಗಳನ್ನು ಪನ್ನೀರ್‌ಸೆಲ್ವಂ ಅವರಿಗೆ ವಹಿಸಲಾಗಿದೆ. ಹಾಗೆಯೇ ಸಂಪುಟ ಸಭೆ ನಡೆಸುವ ಅಧಿಕಾರವನ್ನೂ ಅವರಿಗೆ ರಾಜ್ಯಪಾಲರು ವಹಿಸಿದ್ದಾರೆ.
 
ಈ ತಿಂಗಳಾಂತ್ಯಕ್ಕೆ ಈಶಾನ್ಯ ಮುಂಗಾರು ತಮಿಳುನಾಡಿಗೆ ಆಗಮಿಸುತ್ತಿದ್ದು, ಅದಕ್ಕೂ ಮೊದಲು ಸಭೆ ನಡೆಸಲಾಗಿದೆ. ಕಳೆದ ಬಾರಿಯ ಮುಂಗಾರು ಮಳೆ ಆರ್ಭಟಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿತ್ತು. 

ತಮಿಳುನಾಡಲ್ಲಿ 'ಜಯಾ ಫೋಟೋ' ಸರ್ಕಾರ ( ವಿಡಿಯೋ)


ಕೃಪೆ: ZEE News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮೆಟ್ರೋದಲ್ಲಿ ಅಮೂಲ್ ಗೆ ಅವಕಾಶ ಕೊಟ್ಟಿತಾ

ನಮ್ಮ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಿರೋದು ಪ್ರವೇಶ ಶುಲ್ಕ ಯಾಕೆ: ಮೋಹನ್ ದಾಸ್ ಪೈ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಸಾವಿಗೆ ಮುನ್ನ ಮನುಷ್ಯನ ತಲೆಗೆ ಬರುವ ವಿಚಾರಗಳೇನು

Video: ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಗೆ ಶೇಮ್ ಎಂದು ಮರ್ಯಾದೆ ಕಳೆದ ಪಾಕಿಸ್ತಾನಿಯರು

ಮುಂದಿನ ಸುದ್ದಿ
Show comments