Select Your Language

Notifications

webdunia
webdunia
webdunia
webdunia

ಅಸ್ಸುಂಡಿ ಹೊನ್ನಾರಪ್ಪ ಬೆಂಬಲಿಗರಿಂದ ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಾಟ

ಅಸ್ಸುಂಡಿ ಹೊನ್ನಾರಪ್ಪ ಬೆಂಬಲಿಗರಿಂದ ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಾಟ
ಬಳ್ಳಾರಿ , ಶುಕ್ರವಾರ, 1 ಆಗಸ್ಟ್ 2014 (13:47 IST)
ಉಪಚುನಾವಣೆಯಲ್ಲಿ ಟಿಕೇಟ್‌ ಕೈ ತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಮುಖಂಡ ಅಸ್ಸುಂಡಿ ಹೊನ್ನಾರಪ್ಪ ಎನ್ನವವರ ಬೆಂಬಲಿಗರು ಕಾಂಗ್ರೆಸ್‌ ಕಚೇರಿ ಯನ್ನು ಶುಕ್ರವಾರ ಧ್ವಂಸಗೈದಿದ್ದಾರೆ.
 
ಟಿಕೇಟ್‌ ಕೈತಪ್ಪಿದ ಹಿನ್ನಲೆಯಲ್ಲಿ ಆಕ್ರೊಷಿತ 50 ಕ್ಕೂ ಹೆಚ್ಚು ಹೊನ್ನಾರಪ್ಪ ಬೆಂಬಲಿಗ ಕಾಂಗ್ರೆಸ್‌ ಕಾರ್ಯಕರ್ತರು ಅನಂತಪುರ ರಸ್ತೆಯಲ್ಲಿ ಕಾಂಗ್ರೆಸ್‌ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಲಿದು ಬಂದಿದೆ.
 
ದಾಳಿ ವೇಳೆ ಕಚೇರಿಯ ಬೀಗ ಮುರಿದ ಒಳನುಗ್ಗಿದ ಅಕ್ರೋಷಿತರು ಕಚೇರಿಯ ಕಿಟಕಿ ಬಾಗಿಲುಗಳು, ಪೀಠೊಪಕರಣಗಳನ್ನು ಧ್ವಂಸಗೈದಿದ್ದಾರೆ.
 
ಕಚೇರಿಯಲ್ಲಿದ್ದ ಕಾಂಗ್ರೆಸ್‌ ನಾಯಕರ ಭಾವಚಿತ್ರಗಳು ,ಬ್ಯಾನರ್‌ಗಳನ್ನು ಹರಿದು,  ಟಿವಿಯನ್ನು ಧ್ವಂಸಗೈದಿದ್ದಾರೆ ಎಂದು ತಿಳಿದು ಬಂದಿದೆ.
 
ಕಚೇರಿಯ ಎದುರು ಟಯರ್‌ ಸುಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 
ಕಾಂಗ್ರೆಸ್‌ ಪಕ್ಷ ಮೊಳಕಾಲ್ಮೂರು ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರಿಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಟೀಕೆಟ್‌ ನೀಡಿದೆ.
 
 

Share this Story:

Follow Webdunia kannada