Webdunia - Bharat's app for daily news and videos

Install App

ಕಿಡ್ನ್ಯಾಪ್ ಮಾಡಿ ವ್ಯಾಟ್ಸಪ್ ನಲ್ಲಿ 100 ಕೋಟಿಗೆ ಬೇಡಿಕೆಯಿಟ್ಟರು!

Webdunia
ಸೋಮವಾರ, 24 ಜುಲೈ 2017 (14:35 IST)
ನವದೆಹಲಿ: ಉದ್ಯಮಿಯೊಬ್ಬರನ್ನು ಅಪಹರಿಸಿ ವ್ಯಾಟ್ಸಪ್ ನಲ್ಲಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಫಿರೋದ್ ಬಾದ್ ನ ಸಂಜೀವ್ ಗುಪ್ತಾ ಎನ್ನುವ ಹೋಟೆಲ್ ಉದ್ಯಮಿ ಅಪಹರಣಗೊಂಡವರು.


ಎರಡು ದಿನಗಳ ಹಿಂದೆ ತಮ್ಮ ಒಡೆತನದ ರೆಸ್ಟೋರೆಂಟ್ ಗೆ ತೆರಳಿದ್ದ ಸಂಜೀವ್ ಗುಪ್ತಾ ನಂತರ ಮನೆಗೆ ಮರಳಿರಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದೀಗ ಎರಡು ದಿನಗಳ ನಂತರ ಮಧ್ಯರಾತ್ರಿ ವೇಳೆಗೆ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್ ನಿಂದ 100 ಕೋಟಿ ರೂ. ನೀಡುವಂತೆ ಬೇಡಿಕೆ ಬಂದಿದೆ.

ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣ ನೀಡಲು ತಪ್ಪಿದರೆ, ಅಥವಾ ಬೇರೆ ಏನಾದರೂ ತಪ್ಪಿಸುವ ಮಾರ್ಗ ನೋಡಿದರೆ ಉದ್ಯಮಿಯನ್ನು ಕೊಲ್ಲುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲೂ ತೊಡಗಿಸಿಕೊಂಡಿರುವ ಸಂಜೀವ್ ಗುಪ್ತಾ ಉದ್ಯಮದ ಶತ್ರುಗಳೇ ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ..  ಅನಿಲ್ ಕುಂಬ್ಳೆಗೆ ಬೆಣ್ಣೆ ಸವರಿ, ರವಿಶಾಸ್ತ್ರಿಗೆ ತುಪ್ಪ ಸವರಿದ ರವಿಚಂದ್ರನ್ ಅಶ್ವಿನ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments