Webdunia - Bharat's app for daily news and videos

Install App

ಮೋದಿ ಭಾಷಣ ಕೇಳಿ ಮಾನಸಿಕ ಅಸ್ವಸ್ಥನಾದ ಉದ್ಯಮಿ

Webdunia
ಬುಧವಾರ, 11 ಜನವರಿ 2017 (10:49 IST)
ನವೆಂಬರ್ 8 ರ ರಾತ್ರಿ ಪ್ರಧಾನಿ ಮೋದಿಯಾಡಿದ ಒಂದು ಭಾಷಣ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತು. 500 ಮತ್ತು 1,000 ರೂಪಾಯಿ ಹಳೆಯ ನೋಟುಗಳ ನಿಷೇಧ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ನಿರ್ಮಿಸಿತು. ಮೋದಿ ಅವರ ಈ ದೃಢ ನಿರ್ಧಾರದಿಂದ ಎಷ್ಟೇ ಸಮಸ್ಯೆಗಳಾದರೂ ಸಾಮಾನ್ಯ ಭಾರತೀಯ ಸದುದ್ದೇಶಕ್ಕೆ ಕೈಗೊಂಡ ನಿರ್ಧಾರ ಎಂದು ಪ್ರಧಾನಿಯನ್ನೇ ಬೆಂಬಲಿಸಿದ. ಆದರೆ ವಿರೋಧ ಪಕ್ಷಗಳು ಬೀದಿಗಿಳಿದು ಈ ನಡೆಯನ್ನು ಹಿಂಪಡೆಯಬೇಕೆಂದು ಪ್ರತಿಭಟನೆ ನಡೆಸಿದವು.
 
ಅದೇನೇ ಇರಲಿ, ಮೋದಿ ಅವರ ಈ ನಿರ್ಧಾರ ದೊಡ್ಡ ದೊಡ್ಡ ಕಪ್ಪುಕುಳಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಆತನಿಗಾಗಿದ್ದು ಅದೇ. 
 
ಉತ್ತರ ಪ್ರದೇಶದ ಲಖನೌ ನಿವಾಸಿ ಉದ್ಯಮಿಯೊಬ್ಬರು ಕಳೆದ ಎರಡು ತಿಂಗಳಿಂದ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಹಸಿವೆಯನ್ನೇ ಮರೆತಿದ್ದಾರೆ. ಊಟ ರುಚಿಸುತ್ತಿಲ್ಲ. ರಾತ್ರಿ ಕೆಟ್ಟ ಕೆಟ್ಟ ಕನಸು, ನಿದ್ದೆಯೂ ಬರುತ್ತಿಲ್ಲ. ಅವರು ಎಲ್ಲೆಂದರಲ್ಲಿ ಸುತ್ತಾಡ ಹತ್ತಿದರು. ಕಾರಣ ಒಬ್ಬ ವಿಶೇಷ ವ್ಯಕ್ತಿಯ ಹೆಸರು, ಆತನ ಮಾತು ಕೇಳಿದ್ರೆ ಅವರಿಗೆ ಭಯವಾಗುತ್ತಿತ್ತು.
 
ಈ ಎಲ್ಲ ಸಮಸ್ಯೆಗಳಿಂದ ಬೇಸತ್ತ ಅವರು ಇತ್ತೀಚಿಗೆ ಲಖನೌನಲ್ಲಿರುವ ಮಾ ಕಮಲಾ ಹೆಲ್ತ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಮಾನಸಿಕ ಆರೋಗ್ಯದ ವೈದ್ಯರನ್ನು ಕಂಡರು. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಿದ ವೈದ್ಯ, ಅಶೋಕ್ ದಲಾಲ್ ಇದು ಮಾನಸಿಕ ಕಾಯಿಲೆಯ ಲಕ್ಷಣ ಎಂದು ಸ್ಪಷ್ಟ ಪಡಿಸಿದರು. 
 
ಅವರಲ್ಲಿ ಈ ಭಯವನ್ನು ಹುಟ್ಟಿಸಿರುವುದು ನವೆಂಬರ್ 8 ರಂದು ಮೋದಿ ಮಾಡಿರುವ ಭಾಷಣ. ಮೋದಿ ಭಾಷಣ ಕೇಳಿದಾಗಿನಿಂದ ಅದು ಅವರ ಕನಸಿನಲ್ಲೂ ಕಾಡುತ್ತಿದೆ. ಕಿವಿಯಲ್ಲಿ ಪ್ರತಿನಿಧಿಸುತ್ತದೆ. ಪೊಲೀಸರು ಬಂಧಿಸುವ ಭಯ ಆವರಿಸಿದೆ. ಮೋದಿ ಎಂದರೆ ಬೆಚ್ಚಿಬೀಳುವ ಅವರೀಗ ಈ ಸಮಸ್ಯೆಗೆ ಔಷಧಿ ಸೇವಿಸುತ್ತಿದ್ದಾರೆ. ನುರಿತ ಮನೋವೈದ್ಯರನ್ನು ಕಾಣುವಂತೆ ದಲಾಲ್ ಉದ್ಯಮಿಗೆ ಸೂಚಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸುವ ದಲಾಲ್ ಮೋದಿ ಭಯದಿಂದಲೇ ಅವರು ಹೀಗಾಗಿದ್ದಾರೆ. ಅವರಿಗೆ ಐದು ರೀತಿಯ ಔಷಧಿಗಳನ್ನು ನೀಡಲಾಗಿದೆ. ಮೊದಲನೆಯದು ಕೋಪ ಕಡಿಮೆಯಾಗಲು, ಎರಡನೆಯದು ಖಿನ್ನತೆಗೆ, ಮೂರನೆಯದು ಮಾನಸಿಕ ಸ್ಥಿಮಿತಕ್ಕೆ, ನಾಲ್ಕನೆಯದು ಸಾಮಾನ್ಯ ಗ್ಯಾಸ್ ಸಮಸ್ಯೆಗೆ ಮತ್ತು ಐದನೆಯದು ವಿಟಮಿನ್ ಮಾತ್ರೆ ಎಂದಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಪಾಕ್‌ಗೆ ಸಹಾಯ ಮಾಡಿದ್ದಕ್ಕೆ ಟರ್ಕಿಗೆ ತಕ್ಕ ಉತ್ತರ ಕೊಟ್ಟ ಭಾರತ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments