Webdunia - Bharat's app for daily news and videos

Install App

ಭೃಷ್ಟಾಚಾರ ಆರೋಪಕ್ಕೆ ನೊಂದು ಸಾವಿಗೆ ಶರಣಾದ ಸಂಪೂರ್ಣ ಕುಟುಂಬ

Webdunia
ಬುಧವಾರ, 28 ಸೆಪ್ಟಂಬರ್ 2016 (08:34 IST)
ಭೃಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆಯನ್ನೆದುರಿಸುತ್ತಿದ್ದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಮಾಜಿ ಅಧಿಕಾರಿ ಬಿ.ಕೆ. ಬನ್ಸಾಲ್ ಹಾಗೂ ಅವರ ಪುತ್ರ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೂರ್ವ ದೆಹಲಿಯ ಮಧುವಿಹಾರ ಪ್ರದೇಶದಲ್ಲಿರುವ ಅಪಾರ್ಟಮೆಂಟ್‌ನಲ್ಲಿ ಅವರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮುಂಜಾನೆ ಮನೆಕೆಲಸದಾಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
 
ಸಂಸ್ಥೆಯೊಂದರಿಂದ 90 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಹೊತ್ತಿದ್ದ ಬನ್ಸಾಲ್ ಅವರನ್ನು ಸಿಬಿಐ ಕಳೆದ ಜುಲೈ 16 ರಂದು ಬಂಧಿಸಿತ್ತು. ಇದರಿಂದ ನೊಂದಿದ್ದ ಪತ್ನಿ ಸತ್ಯಬಾಲಾ ಹಾಗೂ ಪುತ್ರಿ ನೇಹಾ ತಂದೆ ಬನ್ಸಾಲ್ ಬಂಧನವಾದ ಎರಡು ದಿನಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಪುತ್ರ ಮತ್ತು ಬನ್ಸಲ್ ಕೂಡ ಸಾವಿಗೆ ಶರಣಾಗಿರುವುದರಿಂದ ಸಂಪೂರ್ಣ ಕುಟುಂಬ ದುರಂತ ಅಂತ್ಯವನ್ನು ಕಂಡಂತಾಗಿದೆ. 
 
ಸಿಬಿಐ ದಾಳಿಯಿಂದ ಅವಮಾನವಾಗಿದೆ, ಜೀವಿಸಲು ಮನಸೊಪ್ಪುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ತಾಯಿ- ಮಗಳು ಸಾವಿಗೆ ಶರಣಾಗಿದ್ದರು. ಸಾವಿಗೆ ಯಾರನ್ನೂ ಹೊಣೆಯಾಗಿರಸಿರಲಿಲ್ಲ. ಆದರೆ ಬನ್ಸಾಲ್ ಮತ್ತು ಅವರ ಪುತ್ರ ಸಿಬಿಐ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
 
ಬನ್ಸಾಲ್ ಆಗಸ್ಟ್ 26 ರಿಂದ ಜಾಮೀನಿನ ಮೇಲೆ ಹೊರಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಶೀಘ್ರದಲ್ಲೇ ಮೂರು ತಿಂಗಳ ಗೃಹಲಕ್ಷ್ಮಿ ಹಣ ರಿಲೀಸ್‌: ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು

ಭಾರತ ಬಿಟ್ಟು ತೊಲಗಿ ಆದೇಶ: ಅಟ್ಟಾರಿ-ವಾಘಾ ಗಡಿಯಲ್ಲಿ 786 ಪಾಕ್‌ ಪ್ರಜೆಗಳಿಗೆ ಗೇಟ್‌ಪಾಸ್‌

Karnataka Weather: ರಾಜ್ಯದ ಈ ಪ್ರದೇಶಗಳಲ್ಲಿ ಇಂದು ಮಳೆ ಬರುವುದು ಪಕ್ಕಾ

ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವಂ ವೇಳೆ ಗೋಡೆ ಕುಸಿದು ಎಂಟು ಭಕ್ತರು ಸಾವು

ಮುಂದಿನ ಸುದ್ದಿ
Show comments