Webdunia - Bharat's app for daily news and videos

Install App

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಯೋಧ ತೇಜ್ ಬಹದ್ದೂರ್ ಸೇವೆಯಿಂದ ವಜಾ

Webdunia
ಗುರುವಾರ, 20 ಏಪ್ರಿಲ್ 2017 (11:45 IST)
ಬಿಎಸ್`ಎಫ್`ನಲ್ಲಿ ಯೋಧರಿಗೆ ನೀಡಲಾಗುತ್ತಿದ್ದ ಅನಾರೋಗ್ಯಕರ ಆಹಾರ ಸೇರಿದಂತೆ ಸೇನಾ ಅಕ್ರಮಗಳ ಬಗ್ಗೆ ಫೇಸ್ಬುಕ್`ನಲ್ಲಿ ಬಟಾ ಬಯಲು ಮಾಡಿದ್ದ ಬಿಎಸ್`ಎಫ್ ಯೋಧ ತೇಜ್ ಬಹದ್ದೂರ್ ಅವರನ್ನ ಸೇನೆಯಿಂದ ಉಚ್ಚಾಟಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾದಲ್ಲಿ ಸತತ 3 ತಿಂಗಳಿನಿಂದ ನಡೆದ ಕೋರ್ಟ್ ಮಾರ್ಷಲ್ ವಿಚಾರಣೆ ಬಳಿಕ ಸಮ್ಮರಿ ಸೆಕ್ಯೂರಿಟಿ ಕೋರ್ಟ್ ಸೇವೆಯಿಂದ ವಜಾಗೊಳಿಸಿದೆ.


ಕಳಪೆ ಆಹಾರದ ವಿಡಿಯೋವನ್ನ ಫೇಸ್ಬುಕ್`ಗೆ ಅಪ್ಲೋಡ್ ಮಾಡುವ ಮೂಲಕ ತೇಜ್ ಬಹದ್ದೂರ್ ಬಿಎಸ್ಎಫ್ ಘನತೆಗೆ ಧಕ್ಕೆಯುಂಟುಮಾಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಸೇನಾ ಕೋರ್ಟ್ ಹೇಳಿದೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ತೇಜ್ ಬಹದ್ದೂರ್, ಈ ಮೊದಲು ನಿವೃತ್ತಿ ಮತ್ತು ಪೆನ್ಷನ್ ದಾಖಲೆ ಸಿದ್ಧಪಡಿಸಿಕೊಳ್ಳಲು ಹೇಳಲಾಗಿತ್ತು. ಇದೀಗ, ಏಕಾಏಕಿ ಸೇವೆಯಿಂದ ವಜಾಗೊಳಿಸಲಾಗಿದೆ. ಇದು ಪೂರ್ವ ಯೋಜಿತ ವಿಚಾರಣೆ. ಈಗ ನನಗೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಭ್ರಷ್ಟಾಚಾರ ಬಯಲಿಗೆ ನಾನು ಮುಂದಾಗಿದ್ದೆ. ಆದರೆ, ನನ್ನ ಮಾತು ಯಾರಿಗೂ ಕೇಳಿಸಿಲ್ಲ. ಯೋಧರನ್ನ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Trissur Pooram: ತ್ರಿಶ್ಶೂರ್ ಪೂರಂನಲ್ಲಿ ರೊಚ್ಚಿಗೆದ್ದ ಆನೆ ವಿಡಿಯೋ ವೈರಲ್: ಹಲವರಿಗೆ ಗಾಯ

Operation Sindoor: ದಾಳಿ ಮಾಡಿ ಗಂಟೆಯೊಳಗೆ ಭಾರತ ನಮಗೆ ಶರಣಾಗಿದೆ, ಬಿಳಿ ಬಾವುಟ ನೆಟ್ಟಿದೆ: ಕೊಚ್ಚಿಕೊಂಡ ಪಾಕಿಸ್ತಾನ ಸೇನೆ

Operation Sindoor: ಉಗ್ರರನ್ನು ಕೊಂದಿದ್ದಕ್ಕೆ ಪಾಕಿಸ್ತಾನಕ್ಕೆ ಸಿಟ್ಟು, ಭಾರತೀಯ ನಾಗರಿಕರ ಮೇಲೆ ದಾಳಿ, 10 ಮಂದಿ ಸಾವು

Operation Sindoor: ಪಾಕಿಸ್ತಾನ ದಾಳಿಗೆ ಬಂದರೆ ಬರಲಿ, ನಾವೂ ರೆಡಿ ಎಂದ ಭಾರತೀಯ ಸೇನೆ

Operation Sindoor: ಆಪರೇಷನ್ ಸಿಂದೂರ್ ಗೆ ಬಲಿಯಾಯ್ತು ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನ ಕುಟುಂಬ

ಮುಂದಿನ ಸುದ್ದಿ
Show comments