ಸಂಬಂಧಗಳು ದಿನಗಳೆದಂತೆ ಅರ್ಥವನ್ನು ಕಳೆದುಕೊಳ್ಳುತ್ತಿವೆ. ಕಾಮುಕ ಮನಸ್ಸುಗಳಿಗೆ ಯಾವ ಸಂಬಂಧವು ಅರ್ಥಪೂರ್ಣವಾಗಿ ಕಾಣುತ್ತಿಲ್ಲ, ವೈರೊಕೆ ಗ್ರಾಮದ ನಿವಾಸಿಯಾದ 17 ವರ್ಷದ ಯುವತಿಯ ಮೇಲೆ ಆಕೆಯ ಚಿಕ್ಕಮ್ಮನ ಮಗ ಮನಪ್ರೀತ್ ಸಿಂಗ್ ತನ್ನ ಸ್ನೇಹಿತರೊಂದಿಗೆ ಗ್ಯಾಂಗ್ರೇಪ್ ಎಸಗಿದ್ದಾನೆ.
ಯುವತಿಯ ತಾಯಿಯ ದೂರಿನ ಮೇರೆಗೆ ಪೋಲಿಸರು ಆರೋಪಿ ಮನಪ್ರೀತ್ ಸಿಂಗ್ ಮತ್ತು ಆತನ ತಾಯಿ ಪರಮಜಿತ್ ಕೌರ್, ಪತ್ನಿ ಭಾನಾ ಸಿಂಗ್ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ. ಸಮಾಲಸರ್ ಠಾಣೆಯ ಅಧಿಕಾರಿ ದರ್ಶನ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಬ್ಯಾಂಕ್ನಿಂದ ಹಣ ಪಡೆಯುವ ನೆಪದಲ್ಲಿ ಮನ್ಪ್ರೀತ್ ಸಿಂಗ್ ತನ್ನ ಜೊತೆ ಯುವತಿ ಮತ್ತು ಆಕೆಯ ತಾಯಿಯನ್ನು ಬಾಘಾಪುರಾನ್ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾನೆ. ಬ್ಯಾಂಕ್ನಲ್ಲಿ ಯುವತಿಯ ತಾಯಿಯನ್ನು ಕುರಿಸಿ, ಹಣ ತೆಗೆದುಕೊಂಡು ಬರುವ ನೆಪ ಹೇಳಿ ತನ್ನ ಚಿಕ್ಕಪ್ಪನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಆತ ತನ್ನ ಸ್ನೇಹಿತರ ಸಹಾಯದಿಂದ ಯುವತಿಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ, ಯುವತಿಯ ತಾಯಿ ಕಾಣೆಯಾದ ತನ್ನ ಮಗಳು ಮತ್ತು ಸೋದರಳಿಯನನ್ನು ಹುಡುಕಾಡಿದ್ದಾಳೆ ಆದರೆ ಅವರ ಪತ್ತೆಯಾಗಲಿಲ್ಲ. ಆಗ ಆಕೆ ತನ್ನ ಸಹೋದರಿಯ ಹತ್ತಿರ ಜುಲೈ 18 ರಂದು ಗ್ರಾಮಕ್ಕೆ ಹೋಗಿದ್ದಾಗ ಅಲ್ಲಿದ್ದ ತನ್ನ ಪುತ್ರಿಯನ್ನು ಕರೆದುಕೊಂಡು ವಾಪಸ್ಸಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮನ್ಪ್ರೀತ್ ಸಿಂಗ್ ನನ್ನನ್ನು ಕರೆದುಕೊಂಡು ಬುರ್ಜ ಕುಲಾರ್ ಗ್ರಾಮಕ್ಕೆ ಕರೆದುಕೊಂಡು ಹೋದ ನಂತರ ತನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನ ಚಿಕ್ಕಮ್ಮ ಪರಮ್ ಜೀತ್ ಕೌರ್ ನನಗೆ ಮತ್ತು ಬರುವ ಮಾತ್ರೆ ನೀಡಿದ್ದರಿಂದ ನಾನು ಪ್ರಜ್ಞೆ ಕಳೆದುಕೊಂಡ ನಂತರ ಆರೋಪಿ ಮನ್ಪ್ರೀತ್ ಸಿಂಗ್ ಮತ್ತು ಆತನ ಸ್ನೇಹಿತರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಯುವತಿ ನೀಡಿದ ದೂರಿನ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.