Webdunia - Bharat's app for daily news and videos

Install App

'ಮಹಾ' ಮಳೆಗೆ ಕುಸಿದ ಸೇತುವೆ: ಎರಡು ಬಸ್ ಸೇರಿದಂತೆ 10ಕ್ಕೂ ಹೆಚ್ಚು ವಾಹನ ಕೊಚ್ಚಿ ಹೋದ ಶಂಕೆ

Webdunia
ಬುಧವಾರ, 3 ಆಗಸ್ಟ್ 2016 (11:03 IST)
ಮಹಾರಾಷ್ಟ್ರದ ರಾಯ್‌ಗಡ್ ಜಿಲ್ಲೆಯ ಮಹಾದ್ ನಗರದಿಂದ 5 ಕೀಲೋಮೀಟರ್ ಅಂತರದಲ್ಲಿ ಭಾರಿ ದುರಂತ ಸಂಭವಿಸಿದ್ದು ಹೆದ್ದಾರಿ ಸೇತುವೆ ಕುಸಿದು ಕನಿಷ್ಠ 22 ರಿಂದ 25 ಮಂದಿ ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಮುಂಬೈನಿಂದ 170ಕೀಲೋಮೀಟರ್ ದೂರದಲ್ಲಿ ಈ ಅವಘಡ ನಡೆದಿದೆ.


ಭಾರಿ ಮಳೆಯಿಂದ ಅಬ್ಬರಿಸಿ ಸುರಿಯುತ್ತಿರುವ ಮಳೆಗೆ ಸಾವಿತ್ರಿ ನದಿ ಅಪಾಯ ಮಟ್ಟ ಮೀರಿ ನಡೆಯುತ್ತಿದ್ದು ಮುಂಬೈ -ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ಕಟ್ಟಿದ್ದ ಸೇತುವೆ 80% ಕುಸಿದು ಹೋಗಿದೆ. ಮಂಗಳವಾರ- ಬುಧವಾರದ ನಡುವಿನ ರಾತ್ರಿ 2 ಗಂಟೆಗೆ ಈ ದುರ್ಘಟನೆ ನಡೆದಿದೆ. ಸೇತುವೆ ಕುಸಿತದಿಂದಾಗಿ 2 ಸರ್ಕಾರಿ ಬಸ್‌ಗಳು, ಹಲವು ಕಾರ್‌ಗಳು ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ನದಿಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು 22 ರಿಂದ 25 ಜನರ ಸುಳಿವು ಸಿಗುತ್ತಿಲ್ಲ.

ರತ್ನಗಿರಿ ಮತ್ತು ಚಿಪ್ಲುನ್‌ನಿಂದ ಹೊರಟ ಮಹಾರಾಷ್ಟ್ರ ಸರ್ಕಾರಿ ಬಸ್‍ಗಳೆರಡು ನಾಪತ್ತೆಯಾಗಿದ್ದು, ಈ ಬಸ್‍ಗಳು ಸೇತುವೆ ಕುಸಿತದಿಂದ ಕೊಚ್ಚಿಹೋಗಿರಬಹುದು ಎಂದು ಹೇಳಲಾಗುತ್ತಿದೆ.

 ಸ್ಥಳಕ್ಕೆ ಎನ್‍ಡಿಆರ್‍ಎಫ್‌ನ ಎರಡು ಪಡೆ ದೌಡಾಯಿಸಿದೆದ್ದು ಹೆಲಿಕಾಫ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಸೇತುವೆ ಕುಸಿದಿರೋದ್ರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಉಂಟಾಗಿದ್ದು, ಮುಂಬೈ-ಗೋವಾ ಸಂಚಾರ ಅಸ್ತವ್ಯಸ್ತಗೊಂಡಿದೆ.

ಪ್ರವಾಹಕ್ಕೆ ಸೇತುವೆ ಕುಸಿದ ಪರಿಣಾಮ ಎರಡು ಸರ್ಕಾರಿ ಬಸ್ ಗಳು ಕೊಚ್ಚಿ ಹೋದ ಘಟನೆ ಮುಂಬೈ- ಗೋವಾ ಹೆದ್ದಾರಿಯಲ್ಲಿ ನಡೆದಿದೆ.

ಸ್ವತಃ ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೇಲುಸ್ತುವಾರಿ ವಹಿಸಿ ಕಾರ್ಯಾಚರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಫಡ್ನವೀಸ್ ಬಳಿ ಚರ್ಚೆ ನಡೆಸಿದ್ದು ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments