Select Your Language

Notifications

webdunia
webdunia
webdunia
webdunia

ಪಾಕ್ ಪುಂಡಾಟ: ಮತ್ತೋರ್ವ ಯೋಧ ಹುತಾತ್ಮ

ಪಾಕ್ ಪುಂಡಾಟ: ಮತ್ತೋರ್ವ ಯೋಧ ಹುತಾತ್ಮ
ಶ್ರೀನಗರ , ಸೋಮವಾರ, 24 ಅಕ್ಟೋಬರ್ 2016 (08:33 IST)
ಪಾಕ್ ಸೇನೆ ಪದೇ ಪದೇ ಕದನ ವಿರಾಮ ಮಾಡುತ್ತಿದ್ದು ನಿನ್ನೆ ಪಾಕ್ ಸೈನಿಕರು ನಡೆಸಿದ ಫೈರಿಂಗ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಎಸ್ಎಫ್ ಮುಖ್ಯಪೇದೆ ಸುಶೀಲ್ ಕುಮಾರ್ ನಿನ್ನೆ ರಾತ್ರಿ ಹುತಾತ್ಮರಾಗಿದ್ದಾರೆ.

ಜಮ್ಮು ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಸೀಮಿತ ದಾಳಿ ನಡೆಸಿದ ಉಗ್ರರ ರುಂಡ ಚೆಂಡಾಡಿದ ಬಳಿಕ ಪಾಕ್ ಸೈನಿಕರು ಗಡಿಯಲ್ಲಿ ಮೀತಿ ಮೀರಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದಾರೆ. ನಿನ್ನೆ ಆರ್‌ಎಸ್‌ಪುರ ಸೆಕ್ಟರ್‌ನಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾಗ ಸುಶೀಲ್ ಕುಮಾರ್ ಎದೆಗೆ ಗಾಯವಾಗಿತ್ತು.
 
ಶುಕ್ರವಾರ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಗುರುನಮ್ ಸಿಂಗ್ (26) ಶನಿವಾರ ಹುತಾತ್ಮರಾಗಿದ್ದರು. ಪಾಕ್ ಸೇನೆ ಮೇಲೆ ನಮ್ಮ ಬಿಎಸ್ಎಫ್ ಯೋಧರು ಪ್ರತಿ ದಾಳಿ ನಡೆಸಿ ಪಾಕ್‌ನ 7 ಯೋಧರನ್ನು ಯಮಪುರಿಗೆ ಅಟ್ಟಿದ್ದರು. ಈ ದಾಳಿಯಲ್ಲಿ ಹಲವು ಜನರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. 
 
ಇಂದು ಕೂಡ ಪಾಕ್ ರೇಂಜರ್‌ಗಳು ಪರಗ್ವಾಲ್, ಅಕ್ನೂರ್ ಸೆಕ್ಟರ್‌ನಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಲಾಕ್ ವಿರುದ್ಧ ಯುವತಿಯ ಬಂಡಾಯ: 'ನೀಚ ಪದ್ಧತಿಯನ್ನು ಬುಡಸಮೇತ ಕಿತ್ತೆಸೆಯುವೆ!'