Webdunia - Bharat's app for daily news and videos

Install App

100ಕ್ಕೂ ಅಧಿಕ ಜನರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆನ್ನಲಾದ ಡೆಲ್ಲಿ ಮಾಡೆಲ್ ಪತ್ತೆಗೆ ಕೋರ್ಟ್ ಆದೇಶ

Webdunia
ಗುರುವಾರ, 16 ಮಾರ್ಚ್ 2017 (13:17 IST)
ಪೊಲೀಸರು ಸೇರಿದಂತೆ 100ಕ್ಕೂ ಅಧಿಕ ಜನರಿಂದ ಅತ್ಯಾಚಾರ.. ನಿರಂತರ ಲೈಂಗಿಕ ದೌರ್ಜನ್ಯ ಹೀಗೊಂದು ಆರೋಪ ಮಾಡಿದ್ದ 24 ವರ್ಷದ ಮಾಡೆಲ್ ಮತ್ತು ನೇಪಾಳದ ಹದಿಹರೆಯದ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದು, ಪತ್ತೆಗೆ ಬಾಂಬೆ ಹೈಕೋರ್ಟ್ ಪುಣೆ ಪೊಲೀಸರಿಗೆ ಅದೇಶಿಸಿದೆ.
 

ಆರೋಪಗಳು ತೀರಾ ಗಂಭೀರವಾಗಿವೆ. ಸಂತ್ರಸ್ತರ ಬಗ್ಗೆ ನ್ಯಾಯಾಲಯ ಕಳವಳಗೊಂಡಿದ್ದು, ಅವರ ಪತ್ತೆಗೆ ಗಂಭೀರ ಪ್ರಯತ್ನ ನಡೆಸಿ ಎಂದು ಜಸ್ಟೀಸ್ ರಂಜಿತ್ ಮೋರ್ ಮತ್ತು ರೇವತಿ ದೆರೆ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಪ್ರಕರಣದ ಸಿಬಿಐ ತನಿಖೆಗೆ ಕೋರಿದ್ದ ಅಡ್ವೋಕೇಟ್ ಅರ್ಜುನ್ ಕಪೂರ್, 6 ತಿಂಗಳಿಂದ ಸಂತ್ರಸ್ತರು ನಾಪತ್ತೆಯಾಗಿದ್ದು, ಅತ್ಯಾಚಾರ ಆರೋಪಿಗಳ ಪಟ್ಟಿಯಲ್ಲಿ ಪೊಲೀಸರು ಇರುವುದರಿಂದ ಏನಾದರೂ ತೊಂದರೆಯಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.

ಇದೇವೇಳೆ, ತನಿಖಾಧಿಕಾರಿ ಕೋರ್ಟಿಗೆ ಹಾಜರಾಗದಿರುವ ಬಗ್ಗೆ ಮತ್ತು ಸಂತ್ರಸ್ತರು ತಮ್ಮ ದೂರಿನಲ್ಲಿ ಸೂಚಿಸಿದ್ದ ಪೊಲಿಸರು ವಕೀಲರಿಗೆ ಸೂಚನೆ ನೀಡುತ್ತಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, ಆಪಾದಿತರು ಡಿಫೆನ್ಸ್ ವಕೀಲರಿಗೆ ಸೂಚನೆ ನೀಡುವಂತಿಲ್ಲ ೆಂದು ತಾಕೀತು ಮ಻ಡಿದೆ.

ಇದೇವೇಳೆ, ಮಾರ್ಚ್ 31ರ ಮುಂದಿನ ವಿಚಾರಣೆ ವೇಳೆಗೆ ಕೋರ್ಟ್`ಗೆ ಹಾಜರಾಗುವಂತೆ ಪುಣೆ ಕಮೀಷನರ್, ಸರ್ಕಾರದ ಪರವಾಗಿ ಹಾಜರಾಗುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದೆ.

 
ಮಾರ್ಚ್ 2016ರಂದು ನವದೆಹಲಿಯ ಮಾಡೆಲ್ ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಾದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಸಿನಿಮಾದಲ್ಲಿ ನಟನೆಯ ಚಾನ್ಸ್ ಕೊಡಿಸುವುದಾಗಿ ನನ್ನನ್ನು ಮನೆಗೆ ಕರೆಸಿದ್ದ ರೋಹಿತ್ ಭಂಡಾರಿ ತನ್ನ ಸಹಚರರೊಡನೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಬೆಂಕಿ ಹಚ್ಚಿದ ಎಂದು ಆರೋಪಿಸಿದ್ದಳು. ಜೊತೆಗೆ ತಾನು ಮತ್ತು ತನ್ನ ಜೊತೆ ನೇಪಾಳಿ ಯುವತಿಯೊಬ್ಬಳನ್ನ ಮುಂಬೈ, ಭೋಪಾಲ್, ಬೆಂಗಲೂರು ಸೇರಿದಂತೆ ಇತರೆಡೆ ಸುತ್ತಿಸಿ ನೂರಾರು ಜನರಿಂದ ಅತ್ಯಾಚಾರ ನಡೆಸಿದ್ದಾಗಿ ಹೇಳಿಕೊಂಡಿದ್ದಳು.

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ

Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ