Webdunia - Bharat's app for daily news and videos

Install App

ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳ ಆಪರೇಷನ್

Webdunia
ಮಂಗಳವಾರ, 6 ಅಕ್ಟೋಬರ್ 2015 (17:34 IST)
ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳು ಸೇರಿ ಆಪರೇಶನ್ ನಡೆಸುತ್ತಿವೆ ಎಂದು ಕೋಬ್ರಾಪೋಸ್ಟ್.ಕಾಂ ಮತ್ತು ಗುಲೈಲ್ ಎಂಬ ತನಿಖಾ ಪೋರ್ಟಲ್‌ಗಳು ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. 

ಈ ಎರಡು ಪೋರ್ಟಲ್‌ಗಳು ದೆಹಲಿ, ಮುಝಪ್ಪರ್‌ನಗರ್, ಮೀರತ್, ಮಂಗಳೂರಿನಲ್ಲಿ  ರಹಸ್ಯ ಕ್ಯಾಮರಾಗಳ ಮೂಲಕ ನಡೆಸಿದ ಕಾರ್ಯಾಚರಣೆಯಲ್ಲಿ ಹಿಂದುತ್ವ ಗುಂಪುಗಳು ಹಿಂದೂ-ಮುಸ್ಲಿಂ ವಿವಾಹಿತ ಜೋಡಿಗಳನ್ನು ಒಡೆಯಲು" ಹಿಂಸೆ, ಬೆದರಿಕೆ ಮತ್ತು ಭಾವನಾತ್ಮಕ ಬೆದರಿಕೆ ", ಗಳ ಅಸ್ತ್ರವನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿಕೊಂಡಿವೆ. 
 
ಲವ್ ಜಿಹಾದ್ ವಿರುದ್ಧದ ಪಿತೂರಿಯನ್ನು ಬಯಲಿಗೆಳೆಯಲು “ಆಪರೇಶನ್ ಜೂಲಿಯೆಟ್", ಎಂಬ ಕುಟುಕು ಕಾರ್ಯಾಚರಣೆ ನಡೆಸಲಾಗಿತ್ತು. ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ವಿವಾದಾತ್ಮಕ ಬಿಜೆಪಿ ಸಂಸದ ಸಂಗಿತ್ ಸೋಮ್ ಮತ್ತು ವಿಹೆಚ್‌ಪಿ ಮಂಗಳೂರು ಜಿಲ್ಲಾ ಅಧ್ಯಕ್ಷ ಜಗದೀಶ್ ಶೆನಾವಾ  ಸೇರಿದಂತೆ ಬಿಜೆಪಿಯ ಮತ್ತು ಹಿಂದೂ ಸಂಘಟನೆಗಳ ಹಲವು ನಾಯಕರ ಹೆಸರು ಲವ್ ಜಿಹಾದ್ ವಿರುದ್ಧದ ಪಿತೂರಿಯಲ್ಲಿ ಕೇಳಿ ಬಂದಿದೆ. 
 
`ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಹುಡುಗಿಯನ್ನು ಒತ್ತಾಯಪೂರ್ವಕವಾಗಿಯಾದರೂ ವಾಪಸ್ ಹಿಂದೂ ಧರ್ಮಕ್ಕೆ ಮರಳಿ ಕರೆ ತರಲು ಹಿಂದೂ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿರುವುದು ರಹಸ್ಯ ಕಾರ್ಯಾಚರಣೆಯಿಂದ ಬಯಲಾಗಿದೆ`, ಎಂದು ಪೋರ್ಟಲ್‌ಗಳು ವಾದಿಸುತ್ತಿವೆ. 
 
ಹಿಂದೂ-ಮುಸ್ಲಿಮ್ ಮದುವೆಗಳಿಗೆ ಲವ್ ಜಿಹಾದ್ ಹೆಸರು ಕೊಡುವುದು, ಸಾರ್ವಜನಿಕ, ಪೊಲೀಸ್ ಒತ್ತಡ ಹೆಚ್ಚಿಸುವುದು, ಕೇಸ್ ಹಾಕಿಸುವುದು, ಹಿಂದೂ ಸುಳ್ಳು ರೇಪ್ ಕೇಸ್, ಕಿಡ್ನಾಪ್ ಕೇಸ್‍ ದಾಖಲಿಸುವುದು, ಹಿಂದೂ ಹುಡುಗಿ ಅಪ್ರಾಪ್ತೆ ಎಂದು ತೋರಿಸಲು ಸುಳ್ಳು ದಾಖಲೆಗಳ ಸೃಷ್ಟಿ,  ಭಾವನಾತ್ಮಕವಾಗಿ ಒತ್ತಡ ಹೇರುವುದು, ಕೆಲವೊಮ್ಮೆ ಬಲಪ್ರಯೋಗ, ಇವು ತಾವು ನಡೆಸಿದ ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯಗಳು ಎಂದು ಪೋರ್ಟಲ್‌ಗಳು ಹೇಳಿಕೊಂಡಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments