Webdunia - Bharat's app for daily news and videos

Install App

ಜನತಾ ಪರಿವಾರ ವಿಲೀನದಿಂದ ಬಿಜೆಪಿ ಬೆಚ್ಚಿಬಿದ್ದಿದೆ: ನಿತೀಶ್ ಕುಮಾರ್

Webdunia
ಗುರುವಾರ, 16 ಏಪ್ರಿಲ್ 2015 (17:07 IST)
ಜನತಾ ಪರಿವಾರ ವಿಲೀನಗೊಂಡಿರುವುದು ಭಾರತೀಯ ಜನತಾ ಪಕ್ಷದ ನಿದ್ದೆಗೆಡಿಸಿದೆ, ಅದು ಅವರ ತತ್‌ಕ್ಷಣದ ಪ್ರತಿಕ್ರಿಯೆಗಳಲ್ಲಿ ಗೋಚರಿಸುತ್ತದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.  

ಬಿಜೆಪಿ ಒಳಗೊಳಗೆ ಬೆದರಿದೆ. ಅವರ ಪ್ರತಿಕ್ರಿಯೆಯಲ್ಲಿ ಭಯ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇಂದು ಅವರು ನಮಗೆ ಅಣಕವಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಇದು ಅವರ ಅವನತಿಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 
 
"ಪಕ್ಷದ ನೀತಿ ನಿಯಮಗಳು, ಚುನಾವಣಾ ಚಿಹ್ನೆ ಇವೇ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ನಿರ್ಧರಿಸಲು ಸಮಿತಿಯನ್ನು ರಚಿಸಲಾಗಿದೆ", ಎಂದು ಅವರು ತಿಳಿಸಿದ್ದಾರೆ.
 
"ಮುಲಾಯಂ ಸಿಂಗ್ ಅವರ ನಾಯಕತ್ವದಲ್ಲಿ ಎಲ್ಲ ಪಕ್ಷಗಳು ಜತೆ ಸೇರಿವೆ. ಸಮಾಜವಾದಿ ಪಕ್ಷದ ಸದಸ್ಯರು ಸಹ ವಿಲೀನದ ಸಮಯದಲ್ಲಿ  ಹಾಜರಿದ್ದರು. ಆದಷ್ಟು ಬೇಗ ನಾವು ಪಕ್ಷದ ಹೆಸರು, ಬಾವುಟ, ಹಿಹ್ನೆ ,ಪಕ್ಷದ ಸಿದ್ಧಾಂತಗಳು ಮತ್ತು ನೀತಿ ನಿಯಮಗಳ ಬಗ್ಗೆ ನಿರ್ಧರಿಸಲಿದ್ದೇವೆ", ಎಂದು ಸಿಎಂ ಮಾಹಿತಿ ನೀಡಿದ್ದಾರೆ. 
 
ಜನತಾ ಪರಿವಾರ ವಿಲೀನದ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 'ಸೊನ್ನೆಯನ್ನು ಸೊನ್ನೆಗೆ ಸೇರಿಸಿದರೆ ಉಳಿಯುವುದು ಸೊನ್ನೆಯೇ (0+0=0). ಬಿಹಾರದಲ್ಲಿ  ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ', ಎಂದಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments