ಮುಂಬರುವ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಸಂಬಂಧಿಸಿದಂತೆ ಶಿವಸೇನೆ ಜತೆ ಜಟಾಪಟಿಯಲ್ಲಿ ತೊಡಗಿಕೊಂಡಿದ್ದ ಬಿಜೆಪಿ ತನ್ನ ನಿಲುವನ್ನು ಸಡಲಿಕೊಂಡಂತೆ ತೋರುತ್ತದೆ.
ಕಳೆದ ಬುಧವಾರ ಬಿಜೆಪಿ ವರಿಷ್ಠ ನಾಯಕರು ಸೇರಿ ಈ ಕುರಿತು ಸಭೆ ನಡೆಸಿದರು.
ಮಹಾರಾಷ್ಟ್ರ ಬಿಜೆಪಿ ಕೋರ್ ಸಮಿತಿಯ ಮೊದಲ ಸಭೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ನಡೆಯಿತು.
ಶಿವಸೇನೆ ಜತೆಗೀನ ಸೀಟು ಹಂಚಿಕೆ ಕುರಿತ ವಿವಾದದ ಬಗೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಇತರ ನಾಯಕರಾದ ಓಂ ಮಾಥೀರ್ ಮತ್ತು ರಾಜೀವ್ ಪ್ರತಾಪ್ ರೂಡಿ ಎರಡನೇ ಹಂತದಲ್ಲಿ ಮಾತುಕತೆ ನಡೆಸಿದರು.
ಕೋರ್ ಕಮಿಟಿ ಮೊದಲು ನಿತಿನ್ ಗಡ್ಕರಿ ಮುಂದೆ ತನ್ನ ಅಭಿಪ್ರಾಯವನ್ನು ಮಂಡಿಸಿತು. "ನಾವು ನಿರ್ದಿಷ್ಟ ಸಂಖ್ಯೆಯ ಸೀಟುಗಳನ್ನು ನೀಡಿ ಎಂದು ಹಠ ಹಿಡಿದಿರಲಿಲ್ಲ. ಸೀಟು ಹಂಚಿಕೆಗೆ ಗೆಲುವಿನ ಅವಕಾಶ ಮಾನದಂಡವಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತಷ್ಟೇ" ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.