Select Your Language

Notifications

webdunia
webdunia
webdunia
webdunia

ಬಿಜೆಪಿ ದೇಶದ ಜನತೆಯನ್ನು ಮೂರ್ಖರನ್ನಾಗಿಸುವುದು ಬಿಡಬೇಕು: ಶಾಸಕ ರಶೀದ್

ಬಿಜೆಪಿ ದೇಶದ ಜನತೆಯನ್ನು ಮೂರ್ಖರನ್ನಾಗಿಸುವುದು ಬಿಡಬೇಕು: ಶಾಸಕ ರಶೀದ್
ಶ್ರೀನಗರ್ , ಸೋಮವಾರ, 29 ಜೂನ್ 2015 (20:29 IST)
ಜಮ್ಮು ಕಾಶ್ಮಿರದ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಚುನಾವಣೆಯಲ್ಲಿ ಘೋಷಿಸಿದ್ದ ಬಿಜೆಪಿ ನಂತರ ಮೌನವಾಗಿದೆ. ದೇಶದ ಜನತೆಯನ್ನು ಮೂರ್ಖರನ್ನಾಗಿಸುವುದು ಬಿಜೆಪಿ ಬಿಡಬೇಕು ಎಂದು ಶಾಸಕ ಶೇಖ್ ಅಬ್ದುಲ್ ರಶೀದ್ ಕೋರಿದ್ದಾರೆ.    
 
ಕಳೆದ ಒಂದು ವರ್ಷದ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೆಟ್ಟ ಪ್ರದರ್ಶನ ನೀಡಿದೆ. ಪಕ್ಷದ ಇಮೇಜ್ ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. 
 
ಏಕ್ ಪ್ರಧಾನ ಏಕ್ ನಿಶಾನ್, 370ನೇ ವಿಧಿ ರದ್ದು, ಎಲ್ಲಾ ಸಮುದಾಯದವರಿಗೆ ಒಂದೇ ನಾಗರಿಕ ಡ್ರೆಸ್ ಕೋಡ್ ಜಾರಿಗೆ ತರುವುದಾಗಿ ಹೇಳಿದ್ದ ಬಿಜೆಪಿ ಸರಕಾರ, ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನು ಮರೆತು ಜನರನ್ನು ಮೂರ್ಖರನ್ನಾಗಿಸಿದೆ ಎಂದರು.  
 
ಯಾವುದೇ ಸರಕಾರ ಚುನಾವಣೆ ಪ್ರಚಾರದಲ್ಲಿ ಘೋಷಿಸಿದ ಘೋಷಣೆಗಳನ್ನು ಜಾರಿಗೆ ತರುವ ಧೈರ್ಯ ತೋರುವುದಿಲ್ಲ ಎಂದರು.
 
ಕೇಂದ್ರ ಸಚಿವ ಜಿತೇಂದರ್ ಸಿಂಗ್  ಮಾತನಾಡಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ ರಾಷ್ಟ್ರೀಯತೆಯ ಸಿದ್ಧಾಂತದೊಂದಿಗೆ ಬಿಜೆಪಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನೀಡಿದ ಹೇಳಿಕೆಗೆ  ಉತ್ತರ ಕಾಶ್ಮಿರದ ಕುಪ್ವಾರಾ ಜಿಲ್ಲೆಯ ಲಾನ್‌ಗೇಟ್ ವಿಧಾನಸಭೆ ಕ್ಷೇತ್ರದ ಶಾಸಕರಾದ ರಶೀದ್ ಪ್ರತಿಕ್ರಿಯೆ ನೀಡಿದ್ದಾರೆ. 
 

Share this Story:

Follow Webdunia kannada