Webdunia - Bharat's app for daily news and videos

Install App

ಮಾಯಾವತಿಗೆ ಬಿಜೆಪಿ ನೋಟಿಸ್

Webdunia
ಶನಿವಾರ, 28 ಜನವರಿ 2017 (13:51 IST)
ಗ್ಯಾಂಗ್‌ಸ್ಟರ್ ಪರಿವರ್ತಿತ ರಾಜಕಾರಣಿ ಮುಕ್ತಾರ್ ಅನ್ಸಾರಿ ಮತ್ತು ಆತನ ಸಹೋದರನನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಂಡಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿಗೆ ಬಿಜೆಪಿ ಲೀಗಲ್ ನೋಟಿಸ್ ಕಳುಹಿಸಿದೆ. 

ಅನ್ಸಾರಿ ಗ್ಯಾಂಗ್ 2009ರಲ್ಲಿ ಸ್ಥಳೀಯ ಗುತ್ತಿಗೆದಾರ ಮನ್ನಾ ಸಿಂಗ್‌ನನ್ನು ಕೊಂದಿತ್ತು.  ಈ ಕೃತ್ಯದ ಪ್ರತ್ಯಕ್ಷದರ್ಶಿಯಾಗಿರುವ ಬಿಜೆಪಿ ನಾಯಕ ಅಶೋಕ್ ಸಿಂಗ್ ಮಾಯಾವತಿಗೆ ನೋಟಿಸ್ ರವಾನಿಸಿದ್ದಾರೆ. 
 
ಸಿಂಗ್, ಮಾಯಾವತಿ ವಿರುದ್ಧ ಜನವರಿ 30ರಂದು ಚುನಾವಣಾ ಆಯೋಗಕ್ಕೆ ಸಹ ದೂರು ನೀಡಲಿದ್ದಾರೆ. 
 
ನಾಲ್ಕು ಬಾರಿ ಶಾಸಕನಾಗಿರುವ ಅನ್ಸಾರಿ 'ಮೌ' ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮಾಯಾವತಿ ಜನವರಿ 26ರಂದು ಘೋಷಿಸಿದ್ದರು. ಅನ್ಸಾರಿ ಪುನರ್ ಸೇರ್ಪಡೆಗೆ ಬಿಎಸ್ಪಿಯಲ್ಲೂ ಅಸಮಾಧಾನ ಇರುವುದು ತಿಳಿದು ಬಂದಿದ್ದು, ಆತನ ವಿರುದ್ಧದ ಆರೋಪಗಳು ಇನ್ನು ಸಾಬೀತಾಗಿಲ್ಲ, ಹೀಗಾಗಿ ಅವರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳಲಾಗಿದೆ ಎಂದು ಮಾಯಾವತಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. 
 
ಅನ್ಸಾರಿ ಮಗ ಅಬ್ಬಾಸ್ ಮತ್ತು ಸಹೋದರ ಸಿಬ್ಗತುಲ್ಲಾ ಸಹ ಪಕ್ಷ ಸೇರಿದ್ದು, ಅವರು ಘೋಸಿ ಮತ್ತು ಮೊಹಮ್ಮದಾಬಾದ್‌ನಿಂದ ಚುನಾವಣೆಯನ್ನು ಎದುರಿಸಲಿದ್ದಾರೆ. 
 
1996ರಲ್ಲಿ 'ಮೌ' ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಸದ್ಯ ಅನ್ಸಾರಿ ಲಖನೌ ಜೈಲಿನಲ್ಲಿದ್ದಾನೆ. 

ಮನ್ನಾ ಸಿಂಗ್ ಕೊಲೆಯ ಪ್ರತ್ಯಕ್ಷದರ್ಶಿ ರಾಮ್ ಸಿಂಗ್ ಮೌರ್ಯನನ್ನು ಅನ್ಸಾರಿ ಗ್ಯಾಂಗ್ 2010ರಲ್ಲಿ ಹತ್ಯೆಗೈದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments