ನಾಳೆ ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆಯಿರುವಂತೆಯೇ ಬಿಜೆಪಿ ಸಂಸದ ವಿಜಯ್ ಗೋಯಲ್, ಪ್ರಧಾನಿ ನರೇಂದ್ರ ಮೋದಿಯನ್ನು ರಾಷ್ಟ್ರಪಿತನಿಗೆ ಹೋಲಿಸಿದ್ದಾರೆ.
ರಾಜಸ್ಥಾನದ ರಾಜ್ಯಸಭೆ ಸದಸ್ಯರಾದ ಗೋಯಲ್, ಅಶೋಕ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ಕಚೇರಿಯ ಮುಂದೆ ಬೃಹತ್ ಪೋಸ್ಟರ್ ಲಗತ್ತಿಸಿದ್ದು, ಪ್ರಧಾನಿ ಮೋದಿಯವರನ್ನು ಸಬರಮತಿಯ ಸಂತ ಎಂದು ಹೊಗಳಿದ್ದಾರೆ.
ದೇ ದಿ ದುನಿಯಾ ಮೆ ಪಹಚಾನ್ ನಯಿ, ಉಂಚಾ ಕಿಯಾ ಭಾಲ್, ಸಬರಮತಿ ಕೆ ಸಂತ ತೂನೆ ಕರ್ ದಿಯಾ ಕಮಾಲ್ ಎಂದು ಪ್ರಧಾನಿ ಮೋದಿಯ ಪೋಸ್ಟರ್ ಕೆಳಗಡೆ ಉಲ್ಲೇಖಿಸಿದ್ದಾರೆ.
ದೇ ದಿ ಹಮೇ ಅಜಾದಿ ಬಿನಾ ಖರಾಗ್ ಬಿನಾ ಢಾಲ್, ಸಬರಮತಿ ಕೆ ಸಂತ ತೂನೇ ಕರ್ ದಿಯಾ ಕಮಾಲ್ ಎನ್ನುವ ಮಹಾತ್ಮ ಗಾಂಧಿಯವರು ಬರೆದ ಜನಪ್ರಿಯ ಗೀತೆಯ ಸಾಲುಗಳನ್ನು ಬರೆದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕ ಮತ್ತು ಐರ್ಲೆಂಡ್ನ ಏಳು ದಿನಗಳ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿದ ನಂತರ ಪೋಸ್ಟರ್ ಕಾಣಿಸಿಕೊಂಡಿದೆ.
ರಾಜಧಾನಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯ ಎದುರುಗಡೆ ವಿಜಯ್ ಗೋಯಲ್ ಅವರ ನಿವಾಸವಿದೆ