Select Your Language

Notifications

webdunia
webdunia
webdunia
webdunia

ರಾಷ್ಟ್ರ ಮಾತೆಯಾಗಿ ಗೋವು ಅಭಿಯಾನ: ಬೆಂಬಲವಿದ್ದರೆ 07533007511 ಗೆ ಒಂದು ಮಿಸ್ ಕಾಲ್

ರಾಷ್ಟ್ರ ಮಾತೆಯಾಗಿ ಗೋವು ಅಭಿಯಾನ: ಬೆಂಬಲವಿದ್ದರೆ 07533007511 ಗೆ ಒಂದು ಮಿಸ್ ಕಾಲ್
ನವದೆಹಲಿ , ಶುಕ್ರವಾರ, 3 ಏಪ್ರಿಲ್ 2015 (14:32 IST)
ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕ, ಸಂಸದ, ಪ್ರಖರ ಹಿಂದೂವಾದಿ ಯೋಗಿ ಆದಿತ್ಯನಾಥ್, ಗೋವನ್ನು ರಾಷ್ಟ್ರ ಮಾತೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಆಗಾಗ ಕೋಲಾಹಲ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತ ಬಂದಿರುವ ಇವರು ಕಳೆದ ಕೆಲವು ದಿನಗಳ ಹಿಂದೆ ದೇಶದ ಪ್ರತಿ ಮಸೀದಿಗಳಲ್ಲಿ ಗೌರಿ- ಗಣೇಶ ವಿಗ್ರಹವನ್ನು ಸ್ಥಾಪಿಸಬೇಕು ಎಂದಿದ್ದರು. 

ಆದಿತ್ಯನಾಥ್ ಅವರ ಮುಂದಾಳತ್ವದ ಸಂಘಟನೆ ಹಿಂದೂ ಯುವ ವಾಹಿನಿ ಈಗ ಆಕಳು ರಾಷ್ಟ್ರ ಮಾತೆಯನ್ನಾಗಿ ಘೋಷಿಸಲ್ಪಡಬೇಕು ಎಂದು ಬಯಸುತ್ತಿವೆ. ಬಿಜೆಪಿಯನ್ನು ಜಗತ್ತಿನ ಅತಿ ದೊಡ್ಡ ಪಕ್ಷವಾಗಿಸಿದ ಮಿಸ್ ಕಾಲ್ ಅಭಿಯಾನದ ಯಶಸ್ಸನ್ನು ತಾವು ಕೂಡ ಪಡೆಯಬೇಕು ಎಂದು ಯೋಜನೆ ರೂಪಿಸಿರುವ  ಸಂಘಟನೆ, ಗೋವನ್ನು ರಾಷ್ಟ್ರಮಾತೆಯನ್ನಾಗಿಸುವ ಉದ್ದೇಶಕ್ಕೆ ಬೆಂಬಲವಿದ್ದರೆ  07533007511 ನಂಬರ್‌ಗೆ ಮಿಸ್ ಕಾಲ್ ಕೊಡಬೇಕು ಎಂದು ಘೋಷಿಸಿದೆ. 
 
ಆಕಳು ಸನಾತನ ಧರ್ಮದ ಹೆಗ್ಗುರುತು. ಇದು ಭಾರತದ ಆಧ್ಯಾತ್ಮಿಕ ಮತ್ತು ಆರ್ಥಿಕ ಶಾಸ್ತ್ರದ ನಡುವಿನ ಸಂಪರ್ಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಗೋವಂಶ ಮತ್ತು ಗೋಸಂಪದ ಭಾರತದ ಲೌಖಿಕ ಮತ್ತು ಧಾರ್ಮಿಕ ಪ್ರಪಂಚದ ಸೇತುವೆಯಾಗಿದೆ ಎಂದು ಸಂಸದರು ಅಭಿಪ್ರಾಯ ಪಟ್ಟಿದ್ದಾರೆ.
 
ಬಿಜೆಪಿ ಆಡಳಿತವಿರುವ ದೇಶದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ. 

Share this Story:

Follow Webdunia kannada