ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಭಾರತೀಯ ಜನತಾ ಯುವ ಮೋರ್ಚಾ ನಾಯಕನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಉತ್ತರ ಪ್ರದೇಶ್ ಬದೌನ್ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಲ್ದೀಪ್ ವರ್ಶೆನೆಯ್ ಈ ಹೇಳಿಕೆಯನ್ನು ನೀಡಿದ್ದರು. ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಬಳಿಕ ಕನ್ಹಯ್ಯಾ ಎಲ್ಲರನ್ನು ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು ಆತನ ನಾಲಿಗೆ ಕತ್ತರಿಸಿ ತಂದರೆ ಅವರಿಗೆ 5 ಲಕ್ಷ ರೂಪಾಯಿ ಬಹುಮಾನವನ್ನು ನೀಡುತ್ತೇನೆ ಎಂದು ಘೋಷಿಸಿದ್ದರು.
ವರ್ಶೆನೆಯ್ ಅವರನ್ನು 6 ವರ್ಷದ ಮಟ್ಟಿಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೇಶದ್ರೋಹ ಆರೋಪದ ಮೇಲೆ ಫೆಬ್ರವರಿ 12 ರಂದು ಬಂಧಿಸಲ್ಪಟ್ಟಿದ್ದ ಕನ್ಹಯ್ಯಾ ಷರತ್ತುಬದ್ದ ಜಾಮೀನಿನ ಮೇರೆಗೆ ಮಾರ್ಚ್ 3 ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಜೆಎನ್ಯು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಕನ್ಹಯ್ಯಾ ನನ್ನ ಐಕಾನ್ ಅಫ್ಜಲ್ ಗುರು ಅಲ್ಲ ರೋಹಿತ್ ವೇಮುಲ ಎಂದು ಹೇಳಿದ್ದಾನೆ.