Webdunia - Bharat's app for daily news and videos

Install App

ನೋಟ್ ಬ್ಯಾನ್: ಬಿಜೆಪಿಯಲ್ಲಿ ಹೆಚ್ಚಿನವರು ಅವಿವಾಹಿತರಾಗಿದ್ದರಿಂದ ವಿವಾಹ ಸೀಜನ್‌ ಮರೆತಿದ್ದಾರೆ: ಬಾಬಾ ರಾಮದೇವ್

Webdunia
ಶುಕ್ರವಾರ, 18 ನವೆಂಬರ್ 2016 (14:32 IST)
ಬಿಜೆಪಿ ಪಕ್ಷದಲ್ಲಿ ಅನೇಕರು ಅವಿವಾಹಿತರಾಗಿರುವುದರಿಂದ ಪ್ರಸ್ತುತ ವಿವಾಹ ಸೀಜನ್‌ ಎನ್ನುವುದು ಅರಿವಿಗೆ ಬಂದಿಲ್ಲ. ನೋಟ್ ಬ್ಯಾನ್ ಅವರು ಮಾಡಿದ ದೊಡ್ಡ ತಪ್ಪಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.  
 
ವಿವಾಹದ ಸೀಜನ್‌ನಲ್ಲಿ ಕೇಂದ್ರ ಸರಕಾರ 500 ಮತ್ತು 1000 ರೂ. ನೋಟುಗಳಿಗೆ ನಿಷೇಧ ಹೇರಿರುವುದು ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ. ಇದೀಗ ಕೇಂದ್ರ ಸರಕಾರ ವಿವಾಹ ನೆರವೇರಿಸುತ್ತಿರುವ ಕುಟುಂಬಗಳು 2.5 ಲಕ್ಷ ಹಣವನ್ನು ಪಡೆಯಲು ಅವಕಾಶ ನೀಡಿದೆ.
 
ಒಂದು ವೇಳೆ, ಕೇಂದ್ರ ಸರಕಾರ 15 ದಿನಗಳು ಅಥವಾ ಒಂದು ತಿಂಗಳ ನಂತರ ನೋಟ್ ಬ್ಯಾನ್‌ ಹೇರುತ್ತಿದ್ದಲ್ಲಿ ವಿವಾಹ ಕಾರ್ಯಕ್ರಮಗಳಿಗೆ ಸಿದ್ದವಾಗಿರುವ ಕುಟುಂಬಗಳಿಗೆ ತೊಂದರೆಯಾಗುತ್ತಿರಲಿಲ್ಲ. ಒಂದು ರೀತಿಯಲ್ಲಿ ನೋಟ್ ಬ್ಯಾನ್ ಮಾಡಿರುವುದು ಒಳ್ಳೆಯದೇ ಆಯಿತು ವರದಕ್ಷಿಣೆ ಕೇಳುವುದಿಲ್ಲ ಎಂದು ಜೋಕ್ ಕಟ್ ಮಾಡಿದ್ದಾರೆ.
 
ಕಪ್ಪು ಹಣ ಮತ್ತು ತೆರಿಗೆ ವಂಚಿತ ಹಣವನ್ನು ನಿಯಂತ್ರಿಸಲು ಕೇಂದ್ರ ಸರಕಾರ 500 ಮತ್ತು 1000 ರೂ.ನೋಟು ನಿಷೇಧಕ್ಕೆ ಮುಂದಾಗಿದ್ದರಿಂದ ದೇಶದಲ್ಲಿ ಶೇ.85 ರಷ್ಟು ಹಣ ಒಂದೇ ಬಾರಿಗೆ ಹಿಂಪಡೆದಂತಾಗಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹೆಚ್ಚಿನ ವಿವಾಹ ಕಾರ್ಯಕ್ರಮಗಳು ನಡೆಯುತ್ತವೆ.
 
ವಿವಾಹ ಮಾಡಿಕೊಳ್ಳುವ ವಧು, ವರ ಅಥವಾ ಅವರ ಪೋಷಕರು ಬ್ಯಾಂಕ್‌ನಿಂದ 2.50 ಲಕ್ಷ ಹಣವನ್ನು ಹಿಂಪಡೆಯಬಹುದಾಗಿದೆ ಎಂದು ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತಾ ದಾಸ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

ಪಾಕ್ ಮೇಲೆ ಎಲ್ಲಿ ಯುದ್ಧ ಮಾಡಿದ್ರು ಎಂದ ಕೈ ಶಾಸಕ: ನೀವೇ ನಿಜವಾದ ದುಷ್ಮನ್ ಗಳು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments