ಶಾಲೆಯ ಆವರಣದಲ್ಲಿರುವ ಕೆನಾಲ್ನಲ್ಲಿ ಇಬ್ಬರು ವಿದ್ಯಾರ್ಥಿಗಳ ಶವ ಪತ್ತೆಯಾಗಿರುವುದನ್ನು ಕಂಡು ಆಕ್ರೋಶಗೊಂಡ ಗುಂಪು ಖಾಸಗಿ ಶಾಲೆಯ ನಿರ್ದೆಶಕನನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಿದೆ.
ಹದಿಹರೆಯದ ಯುವಕರ ಗುಂಪು ಬಿದರಿನ ಬಡಿಗೆಗಳಿಂದ ಥಳಿಸಿದ್ದರಿಂದ ಶಾಲೆಯ ನಿರ್ದೇಶಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳ ಸಾವಿಗೆ ಶಾಲೆಯ. ಅಡಳಿತ ಮಂಡಳಿ ಹೊಣೆಯಾಗಿಲ್ಲ ಎಂದು ಡಿಆರ್ಎಸ್ ಶಾಲೆಯ ನಿರ್ದೇಶಕರಾದ 53 ವರ್ಷ ವಯಸ್ಸಿನ ದೇವೇಂದ್ರ ಪ್ರಸಾದ್ ಸಿನ್ಹಾ ಹೇಳಿಕೆ ನೀಡಿದ್ದರೂ ಆಕ್ರೆೋಶಗೊಂಡ ಗುಂಪು ಅವರನ್ನು ಹತ್ಯೆ ಮಾಡಿದೆ.
ಬಿಹಾನ ಮಿರ್ಪುರ್ ಗ್ರಾಮದಲ್ಲಿ ಇಂದು 11.30 ಗಂಟೆ ಸುಮಾರಿಗೆ ವಸತಿಗೃಹದಲ್ಲಿ ವಾಸವಾಗಿದ್ದ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳ ಶವ ಪತ್ತೆಯಾಗಿವೆ. ಇಬ್ಬರು ವಿದ್ಯಾರ್ಥಿಗಳ ಪೋಷಕರು ಮಕ್ಕಳು ಕಾಣೆಯಾದ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದರು. ಇಬ್ಬರು ವಿದ್ಯಾರ್ಥಿಗಳ ಸಾವಿನಲ್ಲಿ ಶಾಲೆಯ ಅಡಳಿತ ಮಂಡಳಿಯ ಕೈವಾಡವಿದೆ ಎನ್ನುವುದು ಗ್ರಾಮಸ್ಥರ ಸಂಶಯವಾಗಿತ್ತು.
ನಳಂದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇಬ್ಬರು ವಿದ್ಯಾರ್ಥಿಗಳ ಸಾವು ಹಾಗೂ ಶಾಲೆ ನಿರ್ದೇಶಕರ ಹತ್ಯೆಯ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ವಿಡಿಯೋ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.