Select Your Language

Notifications

webdunia
webdunia
webdunia
webdunia

ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ತಪ್ಪೊಪ್ಪಿಕೊಂಡ ಎಮ್ಎಲ್‌ಸಿ ಪುತ್ರ

ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ತಪ್ಪೊಪ್ಪಿಕೊಂಡ ಎಮ್ಎಲ್‌ಸಿ ಪುತ್ರ
ಗಯಾ , ಶನಿವಾರ, 14 ಮೇ 2016 (10:48 IST)
ಬಿಹಾರ್ ರೋಡ್ ರೇಜ್ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದ್ದು ಆರೋಪಿ ರಾಕಿ ಯಾದವ್ ತಾನು ಆದಿತ್ಯ ಸಚ್‌ದೇವ್‌ನನ್ನು ಕೊಂದಿದ್ದು ನಿಜವೆಂದು ಒಪ್ಪಿಕೊಂಡಿದ್ದಾನೆ. ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಇದನ್ನು ಖಚಿತ ಪಡಿಸಿವೆ. 

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಸಹ ರಾಕಿಯ ಗನ್‌ನಿಂದ ಹಾರಿದ ಬುಲೆಟ್‌ನಿಂದ ಆದಿತ್ಯ ಸಾವಾಗಿದೆ ಎಂಬುದನ್ನು ದೃಢ ಪಡಿಸಿವೆ. 
 
ಬಂಧನವಾಗಿದ್ದಾಗಿನಿಂದ ತಾನು ಹತ್ಯೆಗೈದೇ ಇಲ್ಲ ಎಂದು ವಾದಿಸುತ್ತಿದ್ದ ರಾಕಿ ಕೊನೆಗೂ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ.
 
ರಾಕಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಸಹ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ. 
 
ತನ್ನ ತಂದೆಯ ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ರಾಕಿಯನ್ನು ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರು ಬಂಧಿಸಿದ್ದರು. ಕ್ರಿಮಿನಲ್ ಸಂಚು ಮತ್ತು ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಘಟನೆ ನಡೆದ ಮರುದಿನವೇ ಪೊಲೀಸರು ಆರೋಪಿಯ ತಂದೆ ಬಿಂದು ಪ್ರಸಾದ್ ಯಾದವ್‌ ಮತ್ತು ಎಮ್‌ಎಲ್‌ಸಿ ಮನೋರಮಾ ಅವರ ಅಂಗರಕ್ಷಕನನ್ನು ಬಂಧಿಸಿದ್ದರು.
 
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚದೇವ್ ಹಾಗೂ ಸ್ನೇಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಬಿಹಾರದ ಜೆಡಿ(ಯು) ಎಮ್‌ಎಲ್‌ಸಿ ಪುತ್ರ  ಕಾರ್ ಓವರ್ ಟೇಕ್ ಮಾಡಿತ್ತು. ಈ ಕಾರಣಕ್ಕೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಕೊಲೆಗೈದಿದ್ದ. ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಅವಧಿಗೆ ರಘುರಾಂ ರಾಜನ್‌ ಒಲವು