ಗುಜರಾತ್ ಉದ್ಯಮಿಯೊಬ್ಬರಿಂದ 14 ಕೆಜಿ ಚಿನ್ನವನ್ನು ದರೋಡೆ ಮಾಡಿದ್ದ ಆರೋಪಿಯನ್ನು ಬಿಹಾರ್ ಪೊಲೀಸರು ಬಂದಿಸಿದ್ದಾರೆ.
ಆರೋಪಿ ಅರ್ಜುನ್ ರಾಮ್ ಪತ್ತೆಗೆ ಪೊಲೀಸರು 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದರು. ಆದರೆ, ಇಂದು ರೋಹಟಾಸ್ ಜಿಲ್ಲೆಯ ಡುಮಾರಿಯಾ ಗ್ರಾಮಕ್ಕೆ ಆರೋಪಿ ಆಗಮಿಸಿರುವ ಸುಳಿವಿನ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಾಜಕೋಟ್ನ ಉದ್ಯಮಿಯೊಬ್ಬರಿಂದ 14 ಕೆಜಿ ಚಿನ್ನವನ್ನು ದರೋಡೆ ಮಾಡಿ ಗುಜರಾತ್ನಿಂದ ಪರಾರಿಯಾಗಿ ಬಿಹಾರ್ಗೆ ತೆರಳಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ದರೋಡೆ ಮಾಡಿದ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವದೀಪ್ ಲಾಂಡೆ ತಿಳಿಸಿದ್ದಾರೆ.
ಆರೋಪಿ ಅರ್ಜುನ್ ರಾಮ್ ತಾನು ಕಾರ್ಯನಿರ್ವಹಿಸುತ್ತಿದ್ದ ಉದ್ಯಮಿಯ ಬಳಿಯಿಂದಲೇ 14 ಕೆಜಿ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.