Webdunia - Bharat's app for daily news and videos

Install App

ಬಿಹಾರ್ ಪ್ರವಾಹ: ಸಾವಿನ ಸಂಖ್ಯೆ 89ಕ್ಕೆ ಏರಿಕೆ

Webdunia
ಶನಿವಾರ, 6 ಆಗಸ್ಟ್ 2016 (07:54 IST)
ಪ್ರವಾಹ ಸಂಬಂಧಿ ಅವಘಡಗಳಿಂದ ಬಿಹಾರದಲ್ಲಿ ಮೃತಪಟ್ಟವರ ಸಂಖ್ಯೆ 89ಕ್ಕೆ ಏರಿದೆ. ಶುಕ್ರವಾರ 25 ಸಾವು ದಾಖಲಾಗಿದ್ದು,  14 ಜಿಲ್ಲೆಗಳ ಸುಮಾರು 33 ಲಕ್ಷ ಜನರು ಇದರಿಂದ ಬಾಧಿತರಾಗಿದ್ದಾರೆ.

ಪೂರ್ನಿಯಾ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 26 ಮಂದಿ ಮೃತಪಟ್ಟಿದ್ದು,  ಅರಾರಿಯಾದಲ್ಲಿ 21, ಕಥಿಹಾರ್‌ನಲ್ಲಿ 15, ಸುಪೌಲ್‌ನಲ್ಲಿ 8 ಹಾಗೂ ಕೃಷ್ಣಗಂಜ್‌ನಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

ಮಧೇಪುರಾ, ಗೋಪಾಲಗಂಜ್‌ನಲ್ಲಿ ತಲಾ 4, ದರ್ಭಾಂಗಾದಲ್ಲಿ 3 ಮತ್ತು ಮುಜಪ್ಫರ್‌ಪುರ, ಸರಣ ಮತ್ತು ಸಹರ್ಸಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಮಹಾನಂದಾ, ಕನ್‌ಕಯಿ, ಪಾರ್ಮರ್, ಕೋಶಿ ಮತ್ತು ಇತರ ನದಿಗಳು ಪೂರ್ನಿಯಾ, ಅರಾರಿಯಾ,  ದರ್ಭಾಂಗಾ,  ಮಾಧೇಪುರಾ, ಕಥಿಹಾರ್, ಸಹರ್ಸಾ, ಸುಪೌಲ್, ಗೋಪಾಲ್‌ಗಂಜ್ ಪೂರ್ವ ಚಂಪಾರಣ್ಯ, ಪಶ್ಚಿಮ ಚಂಪಾರಣ್ಯ ಮತ್ತು ಮುಜಪ್ಪರ್‌ಪುರ್ ಜಿಲ್ಲೆಗಳ ಮುಳುಗಡೆಗೆ ಕಾರಣವಾಗಿವೆ.

ಇತ್ತೀಚಿನ ವರದಿಗಳ ಪ್ರಕಾರ ಭಾಗಲ್ಪುರದಲ್ಲಿ ಗಂಗಾ ನದಿ, ಸಿವಾನ್ ಜಿಲ್ಲೆಯಲ್ಲಿ ಘಾಗ್ರಾ ನದಿ, ಖಗಾರಿಯಾದ ಬುಧಿ ಗಂಡಕ್ ನದಿ ಹಾಗೂ ಕಥಿಹಾರ  ಮತ್ತು ಖಾಗರರಿಯಾ ಜಿಲ್ಲೆಗಳಲ್ಲಿ ಕೋಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

6.41 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ 1,490 ಬೋಟ್ ಬಳಸಲಾಗುತ್ತಿದೆ. 3.79 ಲಕ್ಷ ಜನರು ಕ್ಯಾಂಪ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments