Select Your Language

Notifications

webdunia
webdunia
webdunia
webdunia

ಬಿಹಾರ್ ಕಾಲೇಜಿಗೆ ಡಾ. ಕಲಾಂ ಹೆಸರನ್ನಿಟ್ಟ ಸಿಎಂ ನಿತೀಶ್ ಕುಮಾರ್

ಬಿಹಾರ್ ಕಾಲೇಜಿಗೆ ಡಾ. ಕಲಾಂ ಹೆಸರನ್ನಿಟ್ಟ ಸಿಎಂ ನಿತೀಶ್ ಕುಮಾರ್
ಪಾಟ್ನಾ , ಮಂಗಳವಾರ, 28 ಜುಲೈ 2015 (20:01 IST)
ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶೃದ್ದಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಬಿಹಾರ್ ಸಿಎಂ ನಿತೀಶ್ ಕುಮಾರ್ ಕಿಸಾನ್‌ಗಂಜ್ ಅಗ್ರಿಕಲ್ಚರ್ ಕಾಲೇಜಿಗೆ ಕಲಾಂ ಹೆಸರನ್ನಿಟ್ಟಿದ್ದಾರೆ.
 
ಅಗ್ರಿಕಲ್ಚರ್ ಕಾಲೇಜು ಇದೀಗ ಡಾ.ಕಲಾಂ ಅಗ್ರಿಕಲ್ಚರ್ ಕಾಲೇಜ್ ಕಿಸಾನ್‌ಗಂಜ್ ಎಂದು ಕರೆಯಲಾಗುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
 
ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಐಐಎಂ ಹಾಲ್‌ನಲ್ಲಿ  ನಿನ್ನೆ ರಾತ್ರಿ ಡಾ.ಕಲಾಂ ಉಪನ್ಯಾಸ ನೀಡುತ್ತಿರುವ ಸಂದರ್ಭದಲ್ಲಿ ಕುಸಿದು ಅನಾರೋಗ್ಯಕ್ಕೆ ಒಳಗಾಗಿದ್ದರು.
 
ಇಂದು ಕಿಸಾನ್‌ಗಂಜ್ ಅಗ್ರಿಕಲ್ಚರ್ ಕಾಲೇಜಿನ ಮೊದಲ ಹಂತದ ಕಟ್ಟಡವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಬೇಕಿತ್ತು. ಆದರೆ, ಡಾ.ಕಲಾಂ ನಿಧನದಿಂದ ಉದ್ಘಾಟನೆಯನ್ನು ರದ್ದುಗೊಳಿಸಿದ್ದರು.
 
ಕಿಸಾನ್‌ಗಂಜ್ ಅಗ್ರಿಕಲ್ಚರ್ ಕಾಲೇಜಿಗೆ ಡಾ.ಕಲಾಂ ಅವರ ಹೆಸರನ್ನಿಟ್ಟಿರುವುದು ಅವರಿಗೆ ತೋರಿದ ಆದರದ ಗೌರವವಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
 

Share this Story:

Follow Webdunia kannada