Webdunia - Bharat's app for daily news and videos

Install App

ಗೊಡ್ಸೆ ಹಿಮ್ಮೆಟ್ಟಿಸಿ ಗಾಂಧೀಜಿ ರಕ್ಷಣೆಗೆ ನಿಂತಿದ್ಧ ಭಿಲಾರೆ ಗುರೂಜಿ ಇನ್ನಿಲ್ಲ

Webdunia
ಗುರುವಾರ, 20 ಜುಲೈ 2017 (12:03 IST)
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಾಥೂರಾಮ್ ಗೊಡ್ಸೆ ಮಹಾತ್ಮಾ ಗಾಂಧೀಜಿಯವರನ್ನ ಕೊಲ್ಲಲು ಬಂದಾಗ ಗೊಡ್ಸೆಯನ್ನ ಹಿಮ್ಮೆಟ್ಟಿಸಿದ್ದ ಭಿಕು ದಜಿ ಭಿಲಾರೆ ಅಲಿಯಾಸ್ ಭಿಲಾರೆ ಗುರೂಜಿ ವಿಧಿವಶರಾಗಿದ್ಧಾರೆ.

 98 ವರ್ಷದ ಭಿಲಾರೆ ಗುರೂಜಿ ಮಹಾರಾಷ್ಟ್ರದ ಭಿಲಾರ್ ಗ್ರಾಮದಲ್ಲಿ ನಿಧನರಾಗಿದ್ದಾರೆ. ಭಿಲಾರೆ ಗುರೂಜಿ ನೀಡಿರುವ ಸಂದರ್ಶನಗಳು ಸಣ್ಣ ಸಣ್ಣ ಬುಕ್ ಲೆಟ್`ಗಳಾಗಿ ಮುದ್ರಿತವಾಗಿರುವುದು ವಿಶೇಷ.

ಸಂದರ್ಶನವೊಂದರಲ್ಲಿ ಭಿಲಾರೆ ಗುರೂಜಿ ಹೇಳಿರುವ ಪ್ರಕಾರ, ಪಂಚಗನಿಯಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿತ್ತು. ಸಹಚರರಾದ ಉಷಾ ಮೆಹ್ತಾ, ಪ್ಯಾರೆಲಾಲ್, ಅರುಣಾ ಅಸಾಫ್ ಅಲಿ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಚಾಕು ಹಿಡಿದಿದ್ದ ಗೊಡ್ಸೆ ನನ್ನ ಬಳಿ ಕೆಲ ಪ್ರಶ್ನೆಗಳಿವೆ ಎಂದು ಹೇಳಿ ಗಾಂಧೀಜಿ ಕಡೆಗೆ ನುಗ್ಗಿದ್ದ. ಆದರೆ, ಅವನನ್ನ ನಿಲ್ಲಿಸಿದ ನಾನು ಕೈತಿರುಗಿಸಿ ಚಾಕು ಕಿತ್ತುಕೊಂಡೆ. ಆದರೆ, ಗಾಂಧಿಜಿ ಅವನನ್ನ ಬಿಡಲು ಹೇಳಿದರು ಎಂದಿದ್ಧಾರೆ. ಆದರೆ, ಕಪೂರ್ ಕಮೀಷನ್ ಅಭಿಪ್ರಾಯದ ಪ್ರಕಾರ, 1944ರ ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಸಾಬೀತಾಗಿಲ್ಲ ಎನ್ನಲಾಗಿದೆ.

ಮಾಹಿತಿ: ಟೈಮ್ಸ್ ಆಫ್ ಇಂಡಿಯಾ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಮಾಸ್ಕ್ ಮ್ಯಾನ್ ರಹಸ್ಯ ಬೇಧಿಸಲು ರಂಗಕ್ಕಿಳಿದ ಖಡಕ್ ಆಫೀಸರ್

ಮಹೇಶ್ ಶೆಟ್ಟಿ ತಿಮರೋಡಿನ ಒದ್ದು ಒಳಗೆ ಹಾಕ್ಸಿದ್ದೀವಿ: ಡಿಕೆ ಶಿವಕುಮಾರ್

ಬೀದಿ ನಾಯಿಗಳ ಎತ್ತಂಗಡಿ ವಿಚಾರದಲ್ಲಿ ಮಹತ್ವದ ತೀರ್ಪು ಕೊಟ್ಟ ಸುಪ್ರೀಂಕೋರ್ಟ್

ನಾನು ಆರ್ ಎಸ್ಎಸ್ ಬಗ್ಗೆ, ಕಮ್ಯುನಿಸ್ಟ್ ಬಗ್ಗೆನೂ ಸ್ಟಡಿ ಮಾಡ್ತೀನಿ: ಡಿಕೆ ಶಿವಕುಮಾರ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments