ಬಾಬಾ ರಾಮದೇವ್ ತಲೆ ತಂದು ಕೊಟ್ಟರೆ 1 ಕೋಟಿ ರೂಪಾಯಿ ಕೊಡುವುದಾಗಿ, ಘೋಷಣೆ ಮಾಡುವುದರ ಮೂಲಕ ಹೋಶಿಯಾರ್ಪುರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಭಗವಾನ್ ಸಿಂಹ್ ಚೌಹಾನ್ ಗಂಭೀರ ವಿವಾದವನ್ನು ಹುಟ್ಟು ಹಾಕಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಮಾತಿನಾಸ್ತ್ರ ಪ್ರಯೋಗಿಸುತ್ತ ದಲಿತರ ಕುರಿತು ಅಪಮಾನಕಾರಿ ಮಾತುಗಳನ್ನು ಪ್ರಯೋಗಿಸಿದ್ದ ಬಾಬ ವಿರುದ್ಧ ಹೋಶಿಯಾರ್ಪುರ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನು ನಡೆಸುತ್ತಿದ್ದ ವೇಳೆ ಚೌಹಾನ್ ಈ ಹೇಳಿಕೆಯನ್ನು ನೀಡಿದ್ದಾರೆ.
ರಾಮದೇವ ಪುತ್ಥಳಿಯನ್ನು ಸುಟ್ಟು ಅವರಿಗೆ ಧಿಕ್ಕಾರ ಕೂಗಿದ ಬಿಎಸ್ಪಿ ನಾಯಕ ರಾಮದೇವ ತಲೆಯನ್ನು ತಮಗೆ ತಂದು ಕೊಟ್ಟವರಿಗೆ 1 ಕೋಟಿ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದರು.
ರಾಮದೇವ್ ಕುರಿತು ತಾವು ಹೇಳಿದ ಮಾತನ್ನು ಸಮರ್ಥಿಸಿಕೊಂಡ ಅವರು ನನ್ನ ಮಾತಿನಲ್ಲಿ ತಪ್ಪೇನಿದೆ? ರಾಮದೇವ್ ಸಂಪೂರ್ಣ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡುತ್ತಾರೆಂದರೆ ನಾನು ಈ ರೀತಿಯಲ್ಲಿ ಮಾತನಾಡುವುದರಲ್ಲಿ ದೋಷವೇನಿದೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಉಚಿತ ಕ್ರಮ ಕೈಗೊಳ್ಳುವಂತೆ ಹೋಶಿಯಾರ್ಪುರದ ಉಪ ಆಯುಕ್ತ ತನು ಕಶ್ಯಪ್ ಸರಕಾರಕ್ಕೆ ಆದೇಶ ನೀಡಿದ್ದಾರೆ.