Webdunia - Bharat's app for daily news and videos

Install App

ಕೇಂದ್ರ ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ: ಸಚಿವ ಜಾವ್ಡೇಕರ್‌ ವಿರುದ್ಧ ಉಪಸಭಾಪತಿ ಕಿಡಿ

Webdunia
ಶುಕ್ರವಾರ, 26 ಫೆಬ್ರವರಿ 2016 (21:23 IST)
ಸಂಸತ್ ಅಧಿವೇಶನದಲ್ಲಿ ನಡೆದ ಚರ್ಚಾಕೂಟದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ತರಾಟೆಗೆ ತೆಗೆದುಕೊಂಡು ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ ಎಂದು ತಾಕೀತು ಮಾಡಿದ ಘಟನೆ ನಡೆಯಿತು.
  
ಜೆಎನ್‌ಯು ಮತ್ತು ಹೈದ್ರಾಬಾದ್ ವಿಶ್ವವಿದ್ಯಾಲಯ ಘಟನೆಗಳ ಬಗ್ಗೆ ಮಾತನಾಡಲು ಶಿವಸೇನೆ ಸಂಸದ ಸಂಜಯ್ ರಾವುತ್ ಅವರಿಗೆ ಸಮಯ ನಿಗದಿಪಡಿಸಿ ಎಂದು ಕುರಿಯನ್‌ಗೆ ಜಾವ್ಡೇಕರ್ ಒತ್ತಾಯಿಸಿದಾಗ, ಕುರಿಯನ್‌ರಿಂದ ತರಾಟೆಗೊಳಗಾದರು.
 
ನೀವು ಇತರರಿಗೆ ಹೆಚ್ಚಿನ ಸಮಯ ನೀಡಿದ್ದೀರಿ. ಅದರಂತೆ, ರಾವುತ್ ಅವರಿಗೂ ಹೆಚ್ಚಿನ ಸಮಯ ನೀಡಿ ಎಂದು ಜಾವ್ಡೇಕರ್ ಹೇಳಿದಾಗ ಆಕ್ರೋಶಗೊಂಡ ಕುರಿಯನ್, ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ. ಕೇಂದ್ರ ಸರಕಾರ ಸದನದಲ್ಲಿ ಮಸೂದೆ ಮಂಡಿಸಲಿರುವುದರಿಂದ ನಾನು ಹೆಚ್ಚಿನ ಸಮಯ ನೀಡಲು ಬಯಸಿದರೂ ಸಾಧ್ಯವಾಗುತ್ತಿಲ್ಲ ಎಂದು ತಿರುಗೇಟು ನೀಡಿದರು.  
 
ರಾಜ್ಯಸಭೆಯ ಸಭಾಪತಿ ಕುರಿಯನ್ ಮತ್ತು ಸಚಿವ ಜಾವ್ಡೇಕರ್ ಅವರ ನಡುವೆ ಉದ್ರಿಕ್ತ ವಾತಾವರಣ ಉಂಟಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ, ಸಚಿವರು ಸಹಕಾರ ನೀಡಲು ಬಯಸಿದ್ದಾರೆ ಎಂದು ಪರಿಸ್ಥಿತಿ ತಿಳಿಗೊಳಿಸಿದರು. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments