Webdunia - Bharat's app for daily news and videos

Install App

ರಸ್ತೆಯಲ್ಲಿ ಉರುಳಿಬಿದ್ದ ಬಿಯರ್ ಲಾರಿ: ಬಿಯರ್ ಬಾಟಲ್`ಗೆ ಮುಗಿಬಿದ್ದ ಜನ

Webdunia
ಬುಧವಾರ, 19 ಏಪ್ರಿಲ್ 2017 (12:29 IST)
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿಯರ್ ಲಾರಿಯಿಂದ ಕೆಳಗೆಬಿದ್ದ ಬಿಯರ್ ಬಾಟಲ್`ಗಳನ್ನ ಆಯ್ದುಕೊಳ್ಳಲು ಜನ ಮುಗಿಬಿದ್ದ ಘಟನೆ ತುಮಕೂರಿನ ಕ್ಯಾತ್ಸಂದ್ರ ಬಳಿ ಹೀರೇಹಳ್ಳಿ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುತ್ತಿದ್ದ ಕಾರು ಮತ್ತು ಬಿಯರ್ ಲಾರಿ ನಡುವೆ ಅವಘಡ ಸಂಭವಿಸಿತ್ತು. ಈ ಸಂದರ್ಭ ಲಾರಿಯಲ್ಲಿದ್ದ ಬಿಯರ್ ಕೇಸ್`ಗಳು ಕೆಳಗೆ ಬಿದ್ದಿದ್ದವು. ಈ ಸಂದರ್ಭ ಮುಗಿಬಿದ್ದ ಜನ ಒಡೆಯದ ಬಾಟಲುಗಳನ್ನ ಆಯ್ದುಕೊಂಡು ಹೋದರು. ಇನ್ನೂ ಕೆಲವರು ಸ್ಥಳದಲ್ಲೇ ಬಿಯರ್ ಬಾಟಲ್ ಓಪನ್ ಮಾಡಿ ಬಿಯರ್ ಕುಡಿದರು.

ಕಾರಿನಲ್ಲಿ ಬರುತ್ತಿದ್ದರು ಕೇಸ್`ಗಟ್ಟಲೆ ಬಿಯರ್ ಕೊಡೊಯ್ದಿದ್ದಾರೆ. ಇನ್ನೂ, ಇತರೆ ಲಾರಿ ಮತ್ತು ಬಸ್ ಚಾಲಕರು ಬಿಯರ್ ಬಾಟಲಿಗಾಗಿ ಜಗಳವೇ ನಡೆಸಿದ್ದಾರೆ. ಈ ಸಂದರ್ಭ ಹಲವು ಸಮಯದವರೆಗೆ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕ್ಯಾತ್ಸಂದ್ರ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments