Select Your Language

Notifications

webdunia
webdunia
webdunia
webdunia

ಗೋಮಾಂಸ ಸೇವಿಸುವವರಿಗೆ ದಾದ್ರಿ ಹತ್ಯೆ ಪ್ರಕರಣದಂತೆ ಶಿಕ್ಷೆಯಾಗಬೇಕು: ಸಾದ್ವಿ ಪ್ರಾಚಿ

ಗೋಮಾಂಸ ಸೇವಿಸುವವರಿಗೆ ದಾದ್ರಿ ಹತ್ಯೆ ಪ್ರಕರಣದಂತೆ ಶಿಕ್ಷೆಯಾಗಬೇಕು: ಸಾದ್ವಿ ಪ್ರಾಚಿ
ಬರೇಲಿ , ಭಾನುವಾರ, 4 ಅಕ್ಟೋಬರ್ 2015 (14:12 IST)
ಗೋಮಾಂಸ ಸೇವನೆ ಮಾಡುವವರಿಗೆ (ಮೊಹಮ್ಮದ್ ಅಖಲಖ್) ದಾದ್ರಿ ಹತ್ಯೆ ಪ್ರಕರಣದಂತೆ ಶಿಕ್ಷೆಯಾಗಬೇಕು ಎಂದು ವಿಶ್ವ ಹಿಂದು ಪರಿಷತ್ ಫೈರ್‌‍ಬ್ರ್ಯಾಂಡ್ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
 
ಅಖಲಖ್ ಹತ್ಯೆಯಲ್ಲಿ ಹಿಂದುಗಳ ಕೈವಾಡವಿಲ್ಲ. ಅವರ ಹತ್ಯೆಯ ಹಿಂದೆ ಸಂಚಿದೆ. ದಾದ್ರಿ ಹತ್ಯೆ ಪ್ರಕರಣದಲ್ಲಿ ಉತ್ತರಪ್ರದೇಶದ ಸಚಿವ ಆಜಂ ಖಾನ್ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ.
 
ಮುಸ್ಲಿಮರು ಹಿಂದುಗಳಿಂದ ಗೋವುಗಳನ್ನು ಕದ್ದು ಭಕ್ಷುಸುತ್ತಿದ್ದಾರೆ ಎಂದು ಪ್ರಾಚಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಗೋಮಾಂಸ ಸೇವಿಸಿದ ಆರೋಪದ ಮೇಲೆ ಹತ್ಯೆಯಾದ ಮೊಹಮ್ಮದ್ ಅಖಲಖ್ ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಗೋಮಾಂಸ ಸೇವನೆ ಕುರಿತಂತೆ ಎಫ್‌ಐಆರ್‌ನಲ್ಲಿ ಯಾವುದೇ ವಿವರಗಳಿಲ್ಲ ಎಂದು ಮೂಲಗಳು ತಿಳಿಸಿವೆ.
 
ಮೊಹಮ್ಮದ್ ಅಖಲಖ್ ಗೋಮಾಂಸ ಸೇವಿಸಿದ್ದಾರೆ ಎಂದು ಆರೋಪಿಸಿ ಸುಮಾರು 200 ಜನರ ಗುಂಪು ಅವರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿತ್ತು.
 

Share this Story:

Follow Webdunia kannada