Webdunia - Bharat's app for daily news and videos

Install App

ವಿಡಿಯೋ ವೈರಲ್ ಎಂಬ ಹೊಸ ಖಾಯಿಲೆ ಬಗ್ಗೆ ಹುಷಾರಾಗಿರಿ!

Webdunia
ಶನಿವಾರ, 7 ಜುಲೈ 2018 (09:41 IST)
ಬೆಂಗಳೂರು: ಇದು ಸೋಷಿಯಲ್ ಮೀಡಿಯಾ ಯುಗ. ಈಗ ಕ್ರಿಮಿನಲ್ ಗಳಿಗೂ ವಿಡಿಯೋ ಹರಿಯಬಿಡುವ ಚಾಳಿ ಅಂಟಿಕೊಂಡಿದೆ. ಭಯಾನಕ ವಿಚಾರವಂದತೆ ಕ್ರಿಮಿನಲ್ ಗಳಿಗೆ ತಾವು ಮಾಡುವ ತಪ್ಪನ್ನು ವಿಡಿಯೋ ಮಾಡಿ ಹರಿಯಬಿಡುವುದರಿಂದ ಸಿಕ್ಕಿ ಹಾಕಿಕೊಳ್ಳುವ ಭಯವೂ ಇಲ್ಲ!

ಮೊನ್ನೆಯಷ್ಟೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬೆತ್ತಲೆ ವಿಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹರಿಯಬಿಡುತ್ತೇನೆಂದು ಹೆದರಿಸಿ ವರದಕ್ಷಿಣೆ ಪೀಕುವ ಪ್ಲ್ಯಾನ್ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ಓದಿದ್ದೇವೆ.

ಇನ್ನೊಂದು ಕಡೆ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೇ ತಮ್ಮನ್ನು ಪ್ರಶ್ನೆ ಮಾಡಿದ ಸಹ ವಿದ್ಯಾರ್ಥಿಯ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದು ನಡೆದಿದೆ. ಇನ್ಯಾರೋ ಆತ್ಮಹತ್ಯೆ ಮಾಡುವುದನ್ನೇ ಲೈವ್ ವಿಡಿಯೋ ಮಾಡಿ ಪ್ರಕಟಿಸುತ್ತಾರೆ.

ವಿಡಿಯೋ ಮಾಡುವ ಹುಚ್ಚು ಇಂದಿನ ಜನಕ್ಕೆ ಎಷ್ಟಿದೆಯೆಂದರೆ ಇದೀಗ ಮತ್ತೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಉನ್ನಾವೋದಲ್ಲಿ ನಡೆದಿದೆ. ಮೂವರು ಕಾಮುಕರು ಮಹಿಳೆಯನ್ನು ರೇಪ್ ಮಾಡಲು ಹವಣಿಸುವ ದೃಶ್ಯವನ್ನು ನಾಲ್ಕನೆಯವನು ಸೆರೆ ಹಿಡಿದು ವಿಡಿಯೋ ವೈರಲ್ ಮಾಡಿದ್ದಾನೆ. ಎಷ್ಟೆಂದರೆ ಆ ವಿಡಿಯೋದಲ್ಲಿ ವಿಡಿಯೋ ಮಾಡಿದ ವ್ಯಕ್ತಿ ಈ ವಿಡಿಯೋವನ್ನು ಟಿವಿಯಲ್ಲೂ ವೈರಲ್ ಮಾಡುತ್ತೇನೆಂದು ಹೇಳುತ್ತಾನೆ.

ಅಲ್ಲಿಯವರೆಗೆ ನಮ್ಮ ನಾಗರಿಕ ಸಮಾಜ ಬಂದು ತಲುಪಿದೆ. ಹೀಗಾಗಿ ಅಪರಿಚಿತರು ಫೋಟೋ, ವಿಡಿಯೋ ಮಾಡಲು ಹೊರಟರೆ ಅದಕ್ಕೆ ಅವಕಾಶ ಕೊಡಬೇಡಿ. ಮಕ್ಕಳೇ ಆಗಿದ್ದರೂ ಅಪರಿಚಿತರಿಗೆ ಪೋಸ್ ಕೊಡದಂತೆ ನೋಡಿಕೊಳ್ಳಿ.

ಇದೊಂದು ಖಾಯಿಲೆಯಂತೇ ಹರಡುತ್ತಿದೆ. ಸೈಬರ್  ಕ್ರೈಂ, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ಎಷ್ಟೇ ಮುನ್ನಚ್ಚರಿಕೆ ವಹಿಸಿದರೂ ಇಂತಹ ಪ್ರಮಾದಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಯಾವ ಕಾನೂನುಗಳೂ ಇಂತಹದ್ದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments