ಯೋಗಗುರು ಬಾಬಾ ರಾಮದೇವ್ ಬುಧವಾರ ಮುಂಜಾನೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಸದಾ ಕೆಸರೆರೆಚಾಟ ಮಾಡಿಕೊಳ್ಳುತ್ತಿದ್ದ ಇಬ್ಬರು ಪ್ರತಿಷ್ಠಿತರು ಭೇಟಿಯಾಗಿದ್ದಷ್ಟೇ ಅಲ್ಲದೆ ಪರಷ್ಪರ ಹೊಗಳಿಕೊಂಡಿದ್ದು ಎಲ್ಲರು ದಂಗು ಬಡಿಯುವಂತೆ ಮಾಡಿದೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಪತಂಜಲಿ ಉತ್ಪನ್ನಗಳನ್ನು ಉಡುಗೊರೆಯಾಗಿ ಕೊಟ್ಟ ಬಾಬಾ ರಾಮದೇವ್ ಯೋಗ, ಪ್ರಾಣಾಯಾಮವನ್ನು ಹೇಳಿಕೊಟ್ಟರು.
ಲಾಲು ಮುಖಕ್ಕೆ ತಮ್ಮ ಕಂಪನಿಯಿಂದ ಉತ್ಪಾದಿಸಿರುವ ಕ್ರೀಮ್ ಹಚ್ಚಿದ ಬಾಬಾ ರಾಮದೇವ್ ಮೊದಲೇ ಲಾಲು ಅವರ ಮುಖ ಕೆಂಪಗಿದೆ. ಈಗ ಚಿನ್ನದ ಬಣ್ಣದಲ್ಲಿ ಹೊಳೆಯುತ್ತಿದೆ ಎಂದು ನಗೆ ಚಟಾಕಿ ಹಾರಿಸಿದರು.
ಲಾಲು ನಮ್ಮ ಯೋಗಕ್ಕಷ್ಟೇ ಅಲ್ಲ ನಮ್ಮ ಪತಂಜಲಿ ಉತ್ಪನ್ನಗಳ ಶಾಶ್ವತ ರಾಯಭಾರಿ ಎಂದು ಬಾಬಾ ಹೇಳಿದರು.
ಯೋಗಕ್ಕೆ ಬಾಬಾ ರಾಮದೇವ್ ಕೊಟ್ಟ ಕೊಡುಗೆ ಅಪಾರ, ಅವರು ಯೋಗದ ಮಹಾರಾಜ. ವಿದೇಶಿ ಕಂಪನಿಗಳಿಂತ ಉತ್ತಮ ಉತ್ಪನ್ನಗಳನ್ನು ಪತಂಜಲಿ ನೀಡುತ್ತಿದೆ. ಬಂಡವಾಳಶಾಹಿಗಳ ಸಾಬೂನುಗಳಲ್ಲಿ ಸೋಡಾವೇ ಹೆಚ್ಚಿರುತ್ತದೆ. ಆದರೆ ಬಾಬಾ ಅವರು ಉತ್ಪಾದಿಸುವ ಸಾಬೂನುಗಳಲ್ಲಿ ಆಕಳ ಹಾಲಿದೆ. ನಾವು ಹಾಲು ಕುಡಿಯುವವರು ಬಾಬಾ ಸೋಪ್ನ್ನೇ ಉಪಯೋಗಿಸುತ್ತೇವೆ. ಇದರಿಂದ ತ್ವಜೆ ಚೆನ್ನಾಗಿರುತ್ತದೆ. ನಾನು ಪತಂಜಲಿ ಅವರ ಉತ್ಪನ್ನಗಳ ಶಾಶ್ವತ ರಾಯಭಾರಿ ಎಂದ ಲಾಲು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪತಂಜಲಿ ಯಶಸ್ಸಿನಿಂದ ಅಸೂಯೆ ಪಟ್ಟಿರುವ ಕೆಲವರು ಅದರ ಹೆಸರು ಕೆಡಿಸಲು ಕುತಂತ್ರ ರೂಪಿಸುತ್ತಿದ್ದಾರೆ ಎಂದು ಲಾಲು ಆರೋಪಿಸಿದ್ದಾರೆ.