Select Your Language

Notifications

webdunia
webdunia
webdunia
webdunia

ಭಾರತದ ಮೊಟ್ಟ ಮೊದಲ ಭಯೋತ್ಪಾದಕ ಗಾಂಧಿ ಹಂತಕ ಗೋಡ್ಸೆ: ಆಜಂ ಖಾನ್

ಭಾರತದ ಮೊಟ್ಟ ಮೊದಲ ಭಯೋತ್ಪಾದಕ ಗಾಂಧಿ ಹಂತಕ ಗೋಡ್ಸೆ: ಆಜಂ ಖಾನ್
ಲಖನೌ , ಸೋಮವಾರ, 22 ಡಿಸೆಂಬರ್ 2014 (16:45 IST)
ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವ ಆರ್‌ಎಸ್ಎಸ್‌ ಮೇಲೆ ಉತ್ತರ ಪ್ರದೇಶದ ಸಚಿವ, ಸಮಾಜವಾದಿ ನಾಯಕ ಆಜಂ ಖಾನ್ ಹರಿಹಾಯ್ದಿದ್ದಾರೆ. ಗೋಡ್ಸೆ  ಭಾರತದ ಮೊಟ್ಟ ಮೊದಲ ಭಯೋತ್ಪಾದಕ ಎಂದು ಅವರು ಹೇಳಿದ್ದಾರೆ. 
ರಾಷ್ಟ್ರಪಿತನ ಕೊಲೆಗಾರನನ್ನು ವೈಭವೀಕರಿಸುವ ಕೇಸರಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.  
 
ಮತಾಂತರ ಕುರಿತಂತೆ ಪ್ರತಿಕ್ರಿಯಿಸದಿರುವಂತೆ ಪ್ರಧಾನಿ ಮೋದಿಯವರ ಮೇಲೆ ಆರ್‌ಎಸ್ಎಸ್  ಒತ್ತಡ ಹೇರಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
 
ಮೋದಿ ದೇಶದಲ್ಲಿ ಅಧ್ಯಕ್ಷೀಯ ಮಾದರಿ ಸರಕಾರವನ್ನು ರಚಿಸುವ ಪರವಾಗಿ ಒಲವನ್ನು ಹೊಂದಿದ್ದಾರೆ. ತನ್ನ ಈ ಬಯಕೆಯನ್ನು ಈಡೇರಿಸಿಕೊಳ್ಳಲು ಸಂವಿಧಾನವನ್ನು ಬದಲಾಯಿಸಲು ಕೂಡ ಅವರು ಹಿಂಜರಿಯುವುದಿಲ್ಲ ಎಂದು ಆಜಂ ಪ್ರಧಾನಿ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

Share this Story:

Follow Webdunia kannada