Webdunia - Bharat's app for daily news and videos

Install App

ಸೊಸೆಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ: ಮೊಬೈಲ್‌ನಲ್ಲಿ ಸಾವಿನ ಚಿತ್ರೀಕರಣ

Webdunia
ಸೋಮವಾರ, 26 ಡಿಸೆಂಬರ್ 2016 (12:25 IST)
ಆತ್ಮಹತ್ಯೆಗೆ ಶರಣಾದ ಆಟೋ ಚಾಲಕರೊಬ್ಬರು ತಾವು ಸಾವಿಗೆ ಶರಣಾಗುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟಿರುವುದು ಇಲ್ಲಿನ ಭಾಸ್ಕರ ನಗರದಲ್ಲಿ ನಡೆದಿದೆ.

ಈ ದುಡುಕಿನ ಕೃತ್ಯಕ್ಕೆ ಕೈ ಹಾಕುವ ಮುನ್ನ ಅವರು ತಮ್ಮ ಸಾವಿಗೆ ಇಂತವರೇ ಕಾರಣ ಎಂದು ಕೂಡ ಮೊಬೈಲ್‌ನಲ್ಲಿಯೇ ರೆಕಾರ್ಡ್ ಮಾಡಿಟ್ಟಿದ್ದಾರೆ. 
 
ಮೃತನನ್ನು ಬಾಬು ಶೇಖ್(50) ಎಂದು ಗುರುತಿಸಲಾಗಿದ್ದು, ತಮ್ಮ ಸಾವಿಗೆ ಸೊಸೆ ಮತ್ತು ಆಕೆಯ ಪರಿವಾರದವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ. 
 
ಘಟನೆ ವಿವರ: ಶೇಖ್ ಅವರ ಮಗನಿಗೆ ಕಳೆದ ವರ್ಷದಂತ್ಯದಲ್ಲಿ ವಿವಾಹವಾಗಿತ್ತು. ಸೊಸೆಯ ಜತೆಗೆ ಬಾಬು ಶೇಖ್ ಸಂಬಂಧ ಉತ್ತಮವಾಗಿರಲಿಲ್ಲ. ಮಾವ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದಾಕೆ ಆರೋಪಿಸಿದ್ದಳು. ಆಕೆಯ ತಂದೆ ಮತ್ತು ಸಹೋದರ ಕೂಡ ಇದೇ ಆರೋಪವನ್ನು ಹೇರಿದ್ದರು.
 
ಡಿಸೆಂಬರ್ 22 ರಂದು ಶೇಖ್ ತಮ್ಮ ಕಿರಿಯ ಮಗನಲ್ಲಿ ಮೊಬೈಲ್ ಚಿತ್ರೀಕರಣ ಮಾಡುವುದು ಹೇಗೆಂದು ಕಲಿತುಕೊಂಡು ರಾತ್ರಿ ನಿದ್ರಿಸಲೆಂದು ತಮ್ಮ ಕೊಠಡಿಗೆ ಹೋಗಿದ್ದಾರೆ. ಮುಂಜಾನೆ ಮನೆ ಸದಸ್ಯರು ಕೋಣೆ ಬಾಗಿಲು ಬಡಿದಾಗ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಅವರ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. 
 
ನೇಣು ಹಾಕಿಕೊಳ್ಳುವಾಗ ಮೊಬೈಲ್‌ನ್ನು ವಿಡಿಯೋ ಮೋಡ್‌ನಲ್ಲಿಟ್ಟಿದ್ದ ಅವರು ಎಲ್ಲ ದೃಶ್ಯಾವಳಿ ಚಿತ್ರೀಕರಣವಾಗುವಂತೆ ಮಾಡಿದ್ದಾರೆ.
 
ಘಟನೆಗೆ ಸಂಬಂಧಿಸಿದಂತೆ ಮೃತರ ಕಿರಿಯ ಪುತ್ರ ಅಬ್ದುಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರ ಆಧಾರದ ಮೇಲೆ ಶೇಖ್ ಸೊಸೆ ಮತ್ತು ಆಕೆಯ ಪರಿವಾರದವರ ಮೇಲೆ ಭಾರತೀಯ ದಂಡ ಸಂಹಿತೆಯ ವಿಧಿ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಯಾರ ಬಂಧನವಾಗಿಲ್ಲ.
 
ತನ್ನ ತಂದೆಯ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಅಬ್ದುಲ್ಲ, ನನ್ನ ಅಣ್ಣ ಪತ್ನಿಗೆ ನೀನು ತಂದೆಯವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವೆ ಎಂದು ಎಷ್ಟೋ ಸಲ ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು, ಆದರೆ ಆಕೆ ತಂದೆಯವರಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಳು. ಇದರಿಂದ ನೊಂದಿದ್ದ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾನೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ