Select Your Language

Notifications

webdunia
webdunia
webdunia
webdunia

ನಮ್ಮಲ್ಲಿ ಪ್ರಧಾನಿ ಮಾತೇ ಅಂತಿಮ, ನಿಮ್ಮ ಹಾಗಲ್ಲ: ಮನಮೋಹನ್ ಸಿಂಗ್‌ಗೆ ಜೇಟ್ಲಿ ಲೇವಡಿ

ನಮ್ಮಲ್ಲಿ ಪ್ರಧಾನಿ ಮಾತೇ ಅಂತಿಮ, ನಿಮ್ಮ ಹಾಗಲ್ಲ: ಮನಮೋಹನ್ ಸಿಂಗ್‌ಗೆ ಜೇಟ್ಲಿ ಲೇವಡಿ
ನವದೆಹಲಿ , ಶನಿವಾರ, 13 ಫೆಬ್ರವರಿ 2016 (16:51 IST)
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ, ಪ್ರಸ್ತುತ ಪ್ರಧಾನಿಯವರ ಮಾತೇ ಅಂತಿಮ. ನಿಮ್ಮ ಪಕ್ಷದಲ್ಲಿರುವಂತಲ್ಲ ಎಂದು ತಿರುಗೇಟು ನೀಡಿದ್ದಾರೆ. 
 
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಿಮೋಟ್ ಕಂಟ್ರೋಲ್ ಎಂದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
 
ಕೇಂದ್ರ ಸರಕಾರದಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಪ್ರತಿಯೊಬ್ಬ ಭಾರತೀಯನ ಯೋಗಕ್ಷೇಮ ನೋಡಿಕೊಳ್ಳುವುದಾಗಿ ಜನತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದರು.
 
ಮಾಜಿ ರಾಷ್ಟ್ರಾಧ್ಯಕ್ಷರು ಮತ್ತು ಮಾಜಿ ಪ್ರಧಾನಿಗಳು ಅಪರೂಪವಾಗಿ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಯನ್ನು ದೇಶ ಆಲಿಸಬೇಕು. ಅವರು ಸ್ವಾತಂತ್ರ್ಯ ದೇಶವನ್ನು ಪ್ರತಿನಿಧಿಸುತ್ತಾರೆ ಎಂದು ಸಿಂಗ್ ಮೋದಿ ಸರಕಾರಕ್ಕೆ ಸಲಹೆ ನೀಡಿದ್ದರು.
 
ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಾದಲ್ಲಿ ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡುವಂತಹ ಪ್ರೌಢತೆಯನ್ನು ಹೊಂದಿರುತ್ತಾರೆ. ಆದ್ದರಿಂದ ಮೋದಿ ಸರಕಾರ ಕೂಡಾ ನನ್ನ ಹೇಳಿಕೆಯನ್ನು ಆಲಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದರು.

Share this Story:

Follow Webdunia kannada