Webdunia - Bharat's app for daily news and videos

Install App

ಧರ್ಮದ ಹೆಸರಲ್ಲಿ ರಮ್ಜಾನ್ ಸಂದರ್ಭದಲ್ಲಿ ರಕ್ತಪಾತ ನಾಚಿಕೆಗೇಡು

Webdunia
ಸೋಮವಾರ, 27 ಜೂನ್ 2016 (12:35 IST)
ಪಾಕಿಸ್ತಾನ್ ಮೂಲದ ಲಷ್ಕರ್- ಇ-ತೈಬಾ ಭಯೋತ್ಪಾದಕರಿಂದ ಹತ್ಯೆಯಾಗಿರುವ ಸಿಆರ್‌ಪಿಎಫ್ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಿ ದುಃಖ ವ್ಯಕ್ತ ಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಧರ್ಮದ ಹೆಸರಲ್ಲಿ ನಡೆಸಲಾಗಿರುವ ಈ ಅನಾಗರಿಕ ಹತ್ಯೆ ನನ್ನ ಗ್ರಹಿಕೆಗೆ ಹೊರತಾಗಿದ್ದು ಎಂದು ಹೇಳಿದ್ದಾರೆ.
 
ಪ್ರಕ್ಷುಬ್ಧ ರಾಜ್ಯದ ಪಂಪೋರ್‌ನಲ್ಲಿ ಶನಿವಾರ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 8 ಅರೆಸೇನಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದರೆ ಉಳಿದ 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 
 
ಸಿಆರ್‌ಪಿಎಫ್ ಮುಖ್ಯ ಕಾರ್ಯಾಲಯ ಹಮ್ಹಾಮಾದಲ್ಲಿ ಭಾನುವಾರ ನಡೆದ ಹುತಾತ್ಮ ಸೈನಿಕರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನ್ನಾಡುತ್ತಿದ್ದ ಅವರು, ಇಸ್ಲಾಂ ಹೆಸರಿನಲ್ಲಿ, ಅದರಲ್ಲೂ ಕ್ಷಮೆ ಮತ್ತು ಶಾಂತಿಯನ್ನು ಸಾರುವ ಪವಿತ್ರ ಮಾಸ ರಮ್ಜಾನ್ ಸಂದರ್ಭದಲ್ಲಿ ಹೇಗೆ ಇಂತಹ ರಕ್ತಪಾತದಂತಹ ನಾಚಿಕೆಗೇಡು ಕೃತ್ಯದಲ್ಲಿ ತೊಡಗುತ್ತಾರೆಂಬುದನ್ನು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. 
 
ಇದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ನಾವು ಕೇವಲ ಕಾಶ್ಮೀರಕ್ಕೆ ಕೆಟ್ಟ ಹೆಸರು ತರುತ್ತಿದ್ದೇವೆ ಮತ್ತು ಶಾಂತಿಯನ್ನು ಸಾರುವ ಧರ್ಮಕ್ಕೆ ಹಿನ್ನಡೆಯನ್ನು ತರುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ. 
 
ಮೆಹಬೂಬಾ ಹೇಳಿಕೆಗೆ ಕ್ರೋಧವನ್ನು ವ್ಯಕ್ತ ಪಡಿಸಿರುಪ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಭಯೋತ್ಪಾದಕತೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಿದ್ದರು. ಈಗ ಭಯೋತ್ಪಾದನೆ ಎನ್ನುವುದು ಮುಸ್ಲಿಂರ ಒಂದು ಶಾಖೆ, ಇದಕ್ಕಾಗಿ ಪ್ರತಿಯೊಬ್ಬ ಮುಸ್ಲಿಂರು ಅವಮಾನವನ್ನು ಅನುಭವಿಸಬೇಕು ಎನ್ನುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಈ ಹೇಳಿಕೆ ಹೊರಬರುತ್ತಿರುವುದು ಅವಮಾನಕರ ಎಂದಿದೆ. 
 
ಘಟನೆ ಬಳಿಕ ಇಸ್ಲಾಮಾಬಾದ್‌ಗೆ ಖಡಕ್ ಎಚ್ಚರಿಕೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ನಾವೇ ಮೊದಲು ದಾಳಿ ನಡೆಸುವುದಿಲ್ಲ. ಆದರೆ ಪಾಕಿಸ್ತಾನ ಫೈಯರ್ ಮಾಡಿದರೆ ನಾವು ನಾವು ಹಾರಿಸುವ ಗುಂಡುಗಳ ಎಣಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಎಂದ ಸಿದ್ದರಾಮಯ್ಯ: ಹಾಗೆಂದ್ರೆ ಯಾರು ಸಾರ್ ಎಂದ ನೆಟ್ಟಿಗರು

ಬಿಜೆಪಿಗೆ ಮತ್ತೆ ನೀವೇ ಅಧ್ಯಕ್ಷರಾ ಎಂದು ಕೇಳಿದ್ದಕ್ಕೆ ವಿಜಯೇಂದ್ರ ಹೇಳಿದ್ದೇನು ಗೊತ್ತಾ

ಕೇಂದ್ರ ಹೇಳಿದಂತೇ ನಾವು ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು: ಸಿದ್ದರಾಮಯ್ಯ

ಬಿಜೆಪಿ ಯೋಗ ದಿನಾಚರಣೆಯಲ್ಲಿ ನಟಿ ಸುಧಾರಾಣಿ, ನಟ ಕೋಮಲ್

ಮುಂದಿನ ಸುದ್ದಿ
Show comments