ಭೂಮಿಯಿರುವವರೆಗೆ ರೇಪ್ಗಳು ನಡೆಯುತ್ತಾ ಇರುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ದೀಪಕ್ ಹಲ್ದಾರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಮತ್ತೊಬ್ಬ ತೃಣಮೂಲ ಕಾಂಗ್ರೆಸ್ ಶಾಸಕ ತಪಸ್ ಪಾಲ್ ರೇಪ್ ಕುರಿತಂತೆ ನೀಡಿದ ಹೇಳಿಕೆ ವಿವಾದ ಹಸಿರಾಗಿರುವಂತೆ ಇದೀಗ ಮತ್ತೊಬ್ಬ ಶಾಸಕನ ಹೇಳಿಕೆ ಹೊರಬಿದ್ದಿರುವುದು ಆಘಾತ ತಂದಿದೆ.
ತೃಣಮೂಲ ಕಾಂಗ್ರೆಸ್ ಶಾಸಕ ದೀಪಕ್ ಹಲ್ದಾರ್ ಹೇಳಿಕೆಯನ್ನು ಬೇಜವಾಬ್ದಾರಿ ಮತ್ತು ಆಕ್ರಮಣಕಾರಿ ಎಂದು ಇತರ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಮೊದಲು ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ ಮಾಡಿದಲ್ಲಿ ಟಿಎಂಸಿ ಕಾರ್ಯಕರ್ತರು ಸಿಪಿಐ(ಎಂ) ಮಹಿಳಾ ಯುವತಿಯರ ಮೇಲೆ ರೇಪ್ ಮಾಡಿಸಿ ತಕ್ಕ ಪಾಠ ಕಲಿಸುವುದಾಗಿ ತೃಣಮೂಲ ಶಾಸಕ ತಪಸ್ ಪಾಲ್ ಹೇಳಿಕೆ ನೀಡಿದ್ದರು.
ಟಿಎಂಸಿ ನಾಯಕರು ಮನಬಂದಂತೆ ಹೇಳಿಕೆಗಳನ್ನು ನೀಡಿ ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹ ಶಾಸಕರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ವಿಪಕ್ಷಗಳು ಒತ್ತಡ ಹೇರಿವೆ.