Webdunia - Bharat's app for daily news and videos

Install App

ಶೀಘ್ರದಲ್ಲೇ ಎರಡನೆಯ ಹಂತದ ಸಮ-ಬೆಸ ಯೋಜನೆ ಘೋಷಿಸಲಿರುವ ದೆಹಲಿ ಸರ್ಕಾರ

Webdunia
ಶನಿವಾರ, 6 ಫೆಬ್ರವರಿ 2016 (14:40 IST)
ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಜಾರಿಯಲ್ಲಿ ತಂದ ಸಮ-ಬೆಸ ವಾಹನ ಸಂಚಾರ ಯಶಸ್ಸಿನ ಸಂತಷದಲ್ಲಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಶೀಘ್ರದಲ್ಲಿಯೇ ಎರಡನೆಯ ಹಂತದ ಸಮ-ಬೆಸ ಯೋಜನೆಯನ್ನು ಘೋಷಿಸಲಿದೆ. ಆಪ್ ಸರ್ಕಾರದ ಮೂಲಗಳು ಇದನ್ನು ಖಚಿತ ಪಡಿಸಿವೆ. 

ಸದ್ಯ ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ಎರಡನೆಯ ಹಂತದಲ್ಲಿ ಸಮ ಬೆಸ ಜಾರಿಗೆ ತರಲು ನಮ್ಮ ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಳ್ಳಲು ಬಯಸುತ್ತದೆ ಎಂದು ಜನವರಿ 25 ರಂದು ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇ-ಮೇಲ್ ಐಡಿ ( oddevenidea@gmail.com)ಯನ್ನು ಸಹ ಬಿಡುಗಡೆ ಮಾಡಿದ್ದರು.  
 
ಬೆಂಗಳೂರಿನಿಂದ ಮರಳಿದ ಬಳಿಕ ಅವರು ದೆಹಲಿವಾಸಿಗಳ ಪ್ರತಿಕ್ರಿಯೆಯನ್ನು ಪರಿಶೀಲಿಸಲಿದ್ದಾರೆ. 
 
ಸಮ ಬೆಸ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮುಖ್ಯವಾಗಿ 6 ಪ್ರಶ್ನೆಗಳಿಗೆ ನಮ್ಮ ಸರ್ಕಾರ ಉತ್ತರವನ್ನು ಅಪೇಕ್ಷಿಸುತ್ತಿದೆ- ಈ ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಬಹುದಾ? ಹೌದೆಂದರೆ ಯಾವಾಗ ಮತ್ತು ಎಷ್ಟು ಅವಧಿಗೆ? ಈ ಯೋಜನೆ ದೆಹಲಿ ಜನರಿಗೆ ಮತ್ತೊಂದು ಕಾರ್ ಕೊಳ್ಳಲು ಪ್ರೇರಣೆ ನೀಡಿತೇ?  ಈ ಹಿಂದೆ ಪರಿಚಯಿಸಿದ್ದ ವಿನಾಯತಿಗಳು ಸರಿಯಾಗಿವೆಯೇ? ಅಥವಾ ಅವುಗಳನ್ನು ಮರುಪರಿಶೀಲಿಸುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರವನ್ನು ಬಯುಸುತ್ತಿದೆ ಎಂದು ಕೇಜ್ರಿವಾಲ್ ಕಳೆದ ತಿಂಗಳು ಹೇಳಿದ್ದರು. 
 
ಎರಡನೆಯ ಹಂತದಲ್ಲಿ ಯೋಜನೆಯನ್ನು ಜಾರಿಗೆ ತರುವುದರ ಕುರಿತಂತೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲು ಫೆಬ್ರವರಿ 6 ಮತ್ತು 7ರಂದು ಎಲ್ಲ 70 ವಿಧಾನಸಭಾ ಕ್ಷೇತ್ರಗಳಲ್ಲಿ  ಆಪ್ ಸಭೆ ನಡೆಸಲಿದೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments