Select Your Language

Notifications

webdunia
webdunia
webdunia
webdunia

ಕಾರು ಕಸಿದುಕೊಂಡು ಪರಾರಿಯಾದ ಸಶಸ್ತ್ರಧಾರಿಗಳು: ಉಗ್ರರ ದಾಳಿಯ ಬೀತಿ?

ಕಾರು ಕಸಿದುಕೊಂಡು ಪರಾರಿಯಾದ ಸಶಸ್ತ್ರಧಾರಿಗಳು: ಉಗ್ರರ ದಾಳಿಯ ಬೀತಿ?
ಪಟಿಯಾಲಾ , ಶನಿವಾರ, 30 ಜನವರಿ 2016 (19:41 IST)
25 ವರ್ಷದ ವ್ಯಕ್ತಿಯೊಬ್ಬನಿಗೆ ನಾಲ್ವರು ಶಸ್ತ್ರಧಾರಿ ಆರೋಪಿಗಳು ರಿವಾಲ್ವರ್‌ನಿಂದ ಬೆದರಿಸಿ ಆತನ ಕಾರು ಕಸಿದುಕೊಂಡು ಪರಾರಿಯಾದ ಘಟನೆ ವರದಿಯಾಗಿದೆ. ಪೊಲೀಸರು ಕಾರು ಕಸಿದುಕೊಂಡು ಹೋದ ವ್ಯಕ್ತಿಗಳು ಉಗ್ರರಿರಬಹುದು ಎಂದು ಶಂಕಿಸಿದ ಪೊಲೀಸರು ಹೈ ಅಲರ್ಟ್ ಜಾರಿಗೊಳಿಸಿದ್ದಾರೆ.
 
ದಶಮೇಶ್ ನಗರ್ ಬಡಾವಣೆಯ ನಿವಾಸಿಯಾದ ವರುಣ್ ಜೈನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಇಂದು ಬೆಳಿಗ್ಗೆ 5 ಗಂಟೆಗೆ ಗುರುದ್ವಾರಕ್ಕಾಗಿ ತೆರಳುತ್ತಿರುವ ಸಂದರ್ಭದಲ್ಲಿ ಮುಸುಕುಧಾರಿಗಳಾದ ನಾಲ್ಕು ಮಂದಿ ಆರೋಪಿಗಳು ಮನೆಯ ಮುಂದೆ ತಡೆದು ರಿವಾಲ್ವರ್‌ನಿಂದ ಬೆದರಿಸಿ ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.  
 
ನಾನು ಅವರನ್ನು ತಡೆಯಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
 
ನಾಲ್ವರು ಆರೋಪಿಗಳು ಶ್ರೀಹಿಂದ್ ರಸ್ತೆಯವರೆಗೆ ನನ್ನನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ, ನಂತರ ಅಲ್ಲಿ ನನ್ನನ್ನು ಇಳಿಸಿ ಪರಾರಿಯಾಗಿದ್ದಾರೆ. ಅವರು ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ.
 
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚರಗೊಂಡ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದೆ. ಅಪರಿಚಿತ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ತಿಂಗಳು ಪಠಾನ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ನಂತರ ಪಂಜಾಬ್ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada