Webdunia - Bharat's app for daily news and videos

Install App

12 ದಿನ ಯಾರಿಗೂ ಸಿಗುವುದಿಲ್ಲ ಅರವಿಂದ ಕೇಜ್ರಿವಾಲ್

Webdunia
ಶುಕ್ರವಾರ, 29 ಜುಲೈ 2016 (10:04 IST)
ಕೇಂದ್ರದ ಜತೆಗಿನ ತೀವ್ರ ಜಟಾಪಟಿಯ ನಡುವೆ 12 ದಿನಗಳ ಬ್ರೇಕ್ ತೆಗೆದುಕೊಳ್ಳಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಪಾಸ್ಸನ ಧ್ಯಾನ (ಭಾರತದ ಪುರಾತನ ಧ್ಯಾನತಂತ್ರದ ಒಂದು ಮಾದರಿ)ಕ್ಕೆ ಶರಣಾಗಲಿದ್ದಾರೆ.

ಜುಲೈ 30 ರಂದು ನಾಗ್ಪುರದಲ್ಲಿರುವ ಧ್ಯಾನಕೇಂದ್ರಕ್ಕೆ ಆಗಮಿಸಲಿರುವ ಕೇಜ್ರಿವಾಲ್ ಆಗಸ್ಟ್ 1 ರಿಂದ 10ರವರೆಗೆ ಧ್ಯಾನ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ವೃತ್ತಪತ್ರಿಕೆ, ದೂರದರ್ಶನ ಮತ್ತು ಇತರ ಎಲ್ಲ ಮಾಧ್ಯಮಗಳಿಂದ ದೂರವಿರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸರ್ಕಾರವನ್ನು ಸಂಭಾಳಿಸಲಿದ್ದಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ಕೇಜ್ರಿವಾಲ್ ಈ ಧ್ಯಾನದ ಮೊರೆ ಹೋಗಿದ್ದರು. ಈಗ ಬರೊಬ್ಬರಿ 2 ವರ್ಷದ ಬಳಿಕ, ಮತ್ತು ದೆಹಲಿಯಲ್ಲಿ ಆಡಳಿತ ಹಿಡಿದ ಒಂದು ವರ್ಷದ ಬಳಿಕ ಮತ್ತೆ ಧ್ಯಾನಕ್ಕೆ ಶರಣಾಗುತ್ತಿದ್ದಾರೆ.

ರಾಜಕೀಯದಿಂದ ನಿವೃತ್ತರಾದ ಬಳಿಕ ತಮ್ಮ ಜೀವನವನ್ನು ವಿಪಾಸ್ಸನ ಧ್ಯಾನದಲ್ಲಿ ಕಳೆಯುವುದಾಗಿ ಕೇಜ್ರಿವಾಲ್ ಈ ಮೊದಲು ಹೇಳಿಕೊಂಡಿದ್ದರು.

ಜನೇವರಿ ತಿಂಗಳಲ್ಲಿ ಸಹ ಸಿಎಂ ಅರವಿಂದ ಕೇಜ್ರಿವಾಲ್ ನಿಸರ್ಗ ಚಿಕಿತ್ಸೆಗಾಗಿ 10ದಿನಗಳ ವೈದ್ಯಕೀಯ ರಜೆಯನ್ನು ಪಡೆದುಕೊಂಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಪಾಕ್‌ಗೆ ಸಹಾಯ ಮಾಡಿದ್ದಕ್ಕೆ ಟರ್ಕಿಗೆ ತಕ್ಕ ಉತ್ತರ ಕೊಟ್ಟ ಭಾರತ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments