Select Your Language

Notifications

webdunia
webdunia
webdunia
webdunia

ಅಂಬೇಡ್ಕರ್‌ಗೆ ಅಪಮಾನವಾಗಿದ್ದರೂ ದೇಶ ತೊರೆಯಲು ಯೋಚಿಸಿರಲಿಲ್ಲ: ರಾಜನಾಥ್

ಅಂಬೇಡ್ಕರ್‌ಗೆ ಅಪಮಾನವಾಗಿದ್ದರೂ ದೇಶ ತೊರೆಯಲು ಯೋಚಿಸಿರಲಿಲ್ಲ: ರಾಜನಾಥ್
ನವದೆಹಲಿ , ಗುರುವಾರ, 26 ನವೆಂಬರ್ 2015 (14:34 IST)
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳಿಂದಾಗಿ ಭಾರಿ ಟೀಕೆಗಳನ್ನು ಎದುರಿಸಿದ್ದರೂ ದೇಶ ತೊರೆಯುವ ಬಗ್ಗೆ ಚಿಂತಿಸಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ಅಮೀರ್ ಖಾನ್‌ಗೆ ಟಾಂಗ್ ನೀಡಿದ್ದಾರೆ.
 
ಅಂಬೇಡ್ಕರ್ ಹಲವಾರು ಬಾರಿ ಅಪಮಾನ ಸಹಿಸಿದ್ದಾರೆ. ಆದರೆ, ಯಾವತ್ತೂ ದೇಶವನ್ನು ತೊರೆಯುವ ಬಗ್ಗೆ ಚಿಂತಿಸಿರಲಿಲ್ಲ. ದೇಶವನ್ನು ಏಕತೆಯಿಂದ ಒಗ್ಗೂಡಿಸುವ ಬಗ್ಗೆ ಮಾತ್ರ ಗಮನಹರಿಸಿದ್ದರು ಎಂದು ತಿಳಿಸಿದ್ದಾರೆ.
 
ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಅಸಹಿಷ್ಣುತೆ ಬಗ್ಗೆ ಮಾತನಾಡಿ ಮತ್ತೊಂದು ವಿವಾದ ಸೃಷ್ಟಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಸಂವಿಧಾನದಲ್ಲಿರುವ ಮೀಸಲಾತಿಯನ್ನು ಯಾವುದೇ ಕಾರಣಕ್ಕೆ ಬದಲಾಯಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದರು.

Share this Story:

Follow Webdunia kannada