Webdunia - Bharat's app for daily news and videos

Install App

ಭೂಕುಸಿತ ಹಿನ್ನಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

Webdunia
ಶುಕ್ರವಾರ, 30 ಜೂನ್ 2017 (11:52 IST)
ಶ್ರೀನಗರ: ಭಾರೀ ಮಳೆ ಹಾಗೂ ಭೂ ಕುಸಿತದ ಪರಿಣಾಮ ಪವಿತ್ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಮರನಾಥ ಯಾತ್ರೆ ನಿನ್ನೆಯಷ್ಟೇ ಆರಂಭಗೊಂಡಿತ್ತು. ಆದರೆ ಭಾರೀ ಮಳೆಯಿಂದಾಗಿ ಜಮ್ಮುವಿನ ಪಹಲ್ಗಾಮ್ ಮತ್ತು ಬಲ್ತಲ್ ಅವಳಿ ಮಾರ್ಗಗಳಲ್ಲಿ ಇಂದು ತೀವ್ರ ಭೂಕುಸಿತ ಉಂಟಾಗಿರುವುದರಿಂದ ಯಾತ್ರೆ ಸ್ಥಗಿತಗೊಂಡಿದೆ ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ(ಎಸ್ಎಎಸ್ ಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಿಕರು ಬಲ್ತಲ್ ಮತ್ತು ನುನ್ ವಾನ್ ನಲ್ಲಿನ ಮೂಲ  ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಯಾತ್ರೆಯ ಸ್ಥಿತಿಗತಿ ಕುರಿತು ನಿಯಂತ್ರಣ ಕೊಠಡಿ ಅಥವಾ ಸಹಾಯವಾಣಿ ಮೂಲಕ ಜನರಿಗೆ ತಿಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
 
ಇನ್ನೊಂದೆಡೆ ಭಾರೀ ಭೂಕುಸಿತದಿಂದಾಗಿ 300 ಕಿಲೋ ಮೀಟರ್ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕೂಡ ರಂಬನ್ ಮತ್ತು ಉದಂಪುರ್ ಜಿಲ್ಲೆಗಳಲ್ಲಿ ಬಂದ್ ಆಗಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ನಶ್ರಿ, ಬಾಲಿ ನಲ್ಹ ಮತ್ತು ಪಂತಿಯಲ್ ಪ್ರದೇಶದಲ್ಲಿ ಭೂ ಕುಸಿತವುಂಟಾಗಿ ಹೆದ್ದಾರಿ ಮುಚ್ಚಲ್ಪಟ್ಟಿದೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Raja Raguvamshi murder: ಗಂಡನನ್ನು ಕೊಲೆ ಬಗ್ಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಸೋನಮ್: ತಂದೆ ಫುಲ್ ಸಪೋರ್ಟ್

Siddaramaiah: ಚಿನ್ನಸ್ವಾಮಿ ದುರಂತದ ಬಗ್ಗೆ ಜೊತೆಯಲ್ಲಿದ್ದವರೂ ಹೇಳಲೇ ಇಲ್ವಲ್ಲಪ್ಪಾ.. ಸಿದ್ದರಾಮಯ್ಯ ಅಳಲು

Kerala cargo Ship fire: ಬೇಪೂರ್ ಹಡಗು ಅಗ್ನಿ ದುರಂತ 18 ಮಂದಿ ರಕ್ಷಣೆ video

Karnataka Weather: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಮುಂದಿನ ಸುದ್ದಿ
Show comments