ನಾಳೆಯಿಂದ ಸತತ 4 ದಿನ ಸರ್ಕಾರಿ ರಜೆ ಇರುವುದರಿಂದ ಬ್ಯಾಂಕ್`ಗಳಿಗೂ ಸಹ ರಜೆ ಇರುತ್ತದೆ. ಹೀಗಾಗಿ, ಸಾರ್ವಜನಿಕರು ಬ್ಯಾಂಕ್`ನಿಂದ ಹಣ ಪಡೆಯಲು ಸಾಧ್ಯವಿಲ್ಲ.
ನಾಳೆ 2ನೇ ಶನಿವಾರ, ನಾಡಿದ್ದು ಭಾನುವಾರ, ಆಗಸ್ಟ್ 14ರಂದು ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ, 4 ದಿನ ಬ್ಯಾಂಕ್`ಗಳಿಗೆ ರಜೆ ಇರುವುದರಿಂದ ಎಲ್ಲ ಬ್ಯಾಂಕ್`ಗಳು ರಜೆ ಇರುತ್ತದೆ.ಬ್ಯಾಂಕಿನಲ್ಲಿ ಯಾವುದೇ ಹಣದ ವಹಿವಾಟು ನಡೆಸುವುದು ಸಾಧ್ಯವಿಲ್ಲ.
ಹೀಗಾಗಿ, ಸಾರ್ವಜನಿಕರು ತಮಗೆ 4 ದಿನಕ್ಕೆ ಬೇಕಾಗುವಷ್ಟು ಖರ್ಚಿನ ಹಣವನ್ನ ಇಂದೇ ಎಟಿಎಂನಿಂದ ಪಡೆದುಕೊಂಡರೆ ಉತ್ತಮ. ಮುಂದಿನ 4 ದಿನ ಎಟಿಎಂಗಳಿಗೆ ಹಣ ತುಂಬಿಸುವ ಪ್ರಕ್ರಿಯೆ ಸಹ ನಡೆಯುವುದಿಲ್ಲ ಹೀಗಾಗಿ, ಎಟಿಎಂಗಳೂ ನೋ ಕ್ಯಾಶ್ ಬೊರ್ಡ್ ಹಾಕಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ