Webdunia - Bharat's app for daily news and videos

Install App

ಚುನಾವಣೆಗೆ ಮುನ್ನ ಪತ್ರಕರ್ತರ ಓಲೈಕೆಗೆ ಗೃಹನಿರ್ಮಾಣ ಯೋಜನೆ

Webdunia
ಸೋಮವಾರ, 29 ಆಗಸ್ಟ್ 2016 (19:03 IST)
ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಪ್ರದೇಶ ಸರ್ಕಾರ ಓಲೈಕೆ ತಂತ್ರದಲ್ಲಿ ಮುಳುಗಿದೆ. ಉತ್ತರಪ್ರದೇಶದ ಪತ್ರಕರ್ತರನ್ನು ಓಲೈಸಲು ಹೊಸ ಗೃಹನಿರ್ಮಾಣ ಯೋಜನೆಯನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಕಟಿಸಿದ್ದಾರೆ. 
 
 ಸರ್ಕಾರಿ ಕ್ವಾರ್ಟರ್‌ಗಳಲ್ಲಿ ವಾಸಿಸುವ 500ಕ್ಕೂ ಹೆಚ್ಚು ಪತ್ರಕರ್ತರಿಗೆ 15 ದಿನಗಳಲ್ಲಿ ತೆರವು ಮಾಡುವಂತೆ ಸೂಚಿಸಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. ಏಕ್ ಘರ್ ಹೊ ಅಪ್ನಾ ಕನಸನ್ನು ನನಸು ಮಾಡಲು ಈ ಯೋಜನೆಯನ್ನು ಪ್ರಕಟಿಸಿದ್ದು, ಸರ್ಕಾರದ ನಾಲ್ಕುವರೆ ವರ್ಷಗಳ ಅವಧಿಯಲ್ಲೇ ಇದು ಪ್ರಥಮ ಎಂದು ಅಖಿಲೇಶ್ ಹೇಳಿದರು. 
 
ರಾಜಸ್ಥಾನ ಮತ್ತು ಮಧ್ಯಪ್ರದೇಶಗಳೂ ಪತ್ರಕರ್ತರಿಗೆ ಗೃಹನಿರ್ಮಾಣ ಯೋಜನೆ ಪ್ರಕಟಿಸಿದ್ದವು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಖಿಲೇಶ್ ಗೃಹನಿರ್ಮಾಣ ಯೋಜನೆ ಪ್ರಕಟಿಸಿದ್ದು ಅನೇಕ ಮಂದಿಯ ಹುಬ್ಬೇರಿಸಿದೆ. ಪತ್ರಕರ್ತರ ಓಲೈಕೆ ಮೂಲಕ ಮಧುರ ಸಂಬಂಧ ಬೆಸೆಯುವ ಪ್ರಯತ್ನ ಎಂದು ವಿರೋಧ ಪಕ್ಷಗಳು ಈ ನಡೆಯನ್ನು ಭಾವಿಸಿವೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments