ಶ್ರೀನಗರ: ಒಂದೆಡೆ ಗೋ ಹತ್ಯೆ ನಿಷೇಧಿಸುವ ಪರ ವಿರೋಧ ಚರ್ಚೆಯಾಗುತ್ತಿದ್ದರೆ, ಇತ್ತ ಅಜ್ಮೀರ್ ನ ದರ್ಗಾವೊಂದು ಮುಸ್ಲಿಮರಿಗೆ ಗೋ ಮಾಂಸ ತಿನ್ನದಂತೆ ಆದೇಶ ಹೊರಡಿಸಿದೆ. ಅಲ್ಲದೆ ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ!
ಸೂಫಿ ಸಂತ ಖ್ವಾಜಾ ಮೊಯಿದ್ದೀನ್ ಚಿಸ್ಟಿಯ ಧರ್ಮಗುರು ಗೋಮಾಂಸ ತಿನ್ನದಂತೆ ತಮ್ಮ ಸಮುದಾಯದವರಿಗೆ ಕರೆ ಕೊಟ್ಟಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಕ್ಷಣದಿಂದಲೇ ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ.
ಅಚ್ಚರಿಯೆಂದರೆ, ಹಿಂದೂ ಸಮುದಾಯದವರೇ ತಮ್ಮ ಧರ್ಮದಲ್ಲಿ ಪವಿತ್ರ ಪ್ರಾಣಿಯೆಂದು ಪರಿಗಣಿಸಲ್ಪಡುವ ಗೋ ಹತ್ಯೆ ನಿಷೇಧವನ್ನು ವಿರೋಧಿಸುತ್ತಿದ್ದಾರೆ. ಆದರೆ ಮುಸ್ಲಿಂ ಸಮುದಾಯದವರು ಇಂತಹದ್ದೊಂದು ಸಂದೇಶ ಕೊಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ